ಚಿತ್ರದುರ್ಗ: ದೀಪಾವಳಿ ಹಬ್ಬದ ಲಕ್ಷ್ಮಿದೇವಿ ಪೂಜೆಗಾಗಿ ಹಣ ತೆಗೆದುಕೊಂಡು ಹೋಗುವ ವೇಳೆ ತಾಲ್ಲೂಕಿನ ಭೀಮಸಮುದ್ರ ಗ್ರಾಮದ ಓಂಕಾರಪ್ಪ ಅವರ ಬಳಿ ₹ 7ಲಕ್ಷವನ್ನು ಕಳ್ಳ ದೋಚಿ ಪರಾರಿಯಾಗಿದ್ದಾನೆ.
ಹೊಳಲ್ಕೆರೆ ರಸ್ತೆಯ ಅಂಗಡಿಯೊಂದರ ಬಳಿ ಮಕ್ಕಳಿಗಾಗಿ ಚಾಕಲೇಟ್ ಖರೀದಿಸಲು ಹೋದಾಗ ಕಳ್ಳತನವಾಗಿದೆ. ‘ಬ್ಯಾಂಕ್ನಲ್ಲಿ ಹೊಸ ನೋಟು ಪಡೆಯಲು ಹಣ ಬದಲಿಸಿರುವುದನ್ನು ಕಳ್ಳ ನೋಡಿರಬಹುದು. ಹೀಗಾಗಿ ಹಿಂಬಾಲಿಸಿಕೊಂಡು ಬಂದು ಕಳವು ಮಾಡಲಾಗಿದೆ’ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.
ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದ್ದು, ಇದನ್ನು ಪೊಲೀಸರು ಪರಿಶೀಲಿಸಿದ್ದಾರೆ. ತನಿಖೆ ಮುಂದುವರೆದಿದೆ.