ಹೊಸದುರ್ಗ: ‘ಸಹನೆ ಅಜ್ಞಾನಿ ಅಥವಾ ಹೇಡಿಗಳ ಅಸ್ತ್ರವಲ್ಲ, ವಿವೇಕಿ ಅಥವಾ ವೀರ ಯೋಧನ ಅಸ್ತ್ರ. ಬಂದೂಕು ಇದ್ದ ಮಾತ್ರಕ್ಕೆ ವೀರ, ಶೂರನಾಗಲು ಸಾಧ್ಯವಿಲ್ಲ. ಆ ಬಂದೂಕನ್ನು ಎಲ್ಲಿ, ಯಾವಾಗ, ಹೇಗೆ, ಏಕೆ ಬಳಸಬೇಕು? ಎನ್ನುವ ವಿವೇಕದಿಂದ ಮಾತ್ರ ಶೂರ, ವೀರ, ಧೀರ ಆಗಲು ಸಾಧ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.