<p><strong>ಹೊಸದುರ್ಗ</strong>: ‘ಸಹನೆ ಅಜ್ಞಾನಿ ಅಥವಾ ಹೇಡಿಗಳ ಅಸ್ತ್ರವಲ್ಲ, ವಿವೇಕಿ ಅಥವಾ ವೀರ ಯೋಧನ ಅಸ್ತ್ರ. ಬಂದೂಕು ಇದ್ದ ಮಾತ್ರಕ್ಕೆ ವೀರ, ಶೂರನಾಗಲು ಸಾಧ್ಯವಿಲ್ಲ. ಆ ಬಂದೂಕನ್ನು ಎಲ್ಲಿ, ಯಾವಾಗ, ಹೇಗೆ, ಏಕೆ ಬಳಸಬೇಕು? ಎನ್ನುವ ವಿವೇಕದಿಂದ ಮಾತ್ರ ಶೂರ, ವೀರ, ಧೀರ ಆಗಲು ಸಾಧ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಸೋಮವಾರ ಬೆಳಿಗ್ಗೆ ನಡೆದ ಚಿಂತನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.</p>.<p>‘ತಾಳ್ಮೆಯ ಸಂಸ್ಕಾರ ಸಿಗಬೇಕಾದದ್ದು ಮನಸ್ಸಿಗೆ. ಯಾರು ತನ್ನ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳು ವರೋ ಆ ವ್ಯಕ್ತಿ ತಾಳ್ಮೆ ಕಳೆದುಕೊಳ್ಳಲಾರರು. ವಿವೇಕ ಇಲ್ಲದವರು ಮಾತ್ರ ತಾಳ್ಮೆ ಕಳೆದುಕೊಳ್ಳುವರು. ಸಹನೆ ಯಿಂದಲೇ ಹೃದಯ ಶ್ರೀಮಂತಿಕೆಯೂ ಹೆಚ್ಚುವುದು’ ಎಂದು ಹೇಳಿದರು.</p>.<p>‘ಸಹನೆ’ ಕುರಿತು ಮಾತನಾಡಿದ ಸಾಣೇಹಳ್ಳಿಯ ಚಿಂತಕ ಸಾ.ನಿ.ರವಿಕುಮಾರ್, ‘ಇಂದಿನ ಮಕ್ಕಳೇ, ನಾಳಿನ ಪ್ರಜೆಗಳು ಎನ್ನುವ ಮಾತಿದೆ. ಆದರೆ, ಮಕ್ಕಳು ಕೇವಲ ವಯಸ್ಸಿನ ಕಾರಣಕ್ಕೆ ಪ್ರಜೆಗಳಾದರೆ ಸಾಲದು, ಅವರು ಸತ್ಪ್ರಜೆಗಳಾಗಬೇಕು ಎಂಬುದು ಪಂಡಿತಾರಾಧ್ಯ ಶ್ರೀಗಳ ಆಶಯ. ಗಾಂಧೀಜಿಯವರು ತಮ್ಮ ತಾಳ್ಮೆ, ಸಹನೆಗಳಿಂದಲೇ ಮಹಾತ್ಮರಾದುದು’ ಎಂದರು.</p>.<p>ಶಿವಸಂಚಾರದ ನಾಗರಾಜ್ ಸಾಣೇಹಳ್ಳಿ, ವಿದ್ಯಾರ್ಥಿ ಗಳಾದ ಸುಪ್ರಭೆ, ಮುಕ್ತಾ ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಮಂತ್ರ ಲೇಖನ ಬರೆಯಲಾಯಿತು. ಅಧ್ಯಾಪಕ ಸಂತೋಷ್ ಕಾರ್ಯಕ್ರಮ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ</strong>: ‘ಸಹನೆ ಅಜ್ಞಾನಿ ಅಥವಾ ಹೇಡಿಗಳ ಅಸ್ತ್ರವಲ್ಲ, ವಿವೇಕಿ ಅಥವಾ ವೀರ ಯೋಧನ ಅಸ್ತ್ರ. ಬಂದೂಕು ಇದ್ದ ಮಾತ್ರಕ್ಕೆ ವೀರ, ಶೂರನಾಗಲು ಸಾಧ್ಯವಿಲ್ಲ. ಆ ಬಂದೂಕನ್ನು ಎಲ್ಲಿ, ಯಾವಾಗ, ಹೇಗೆ, ಏಕೆ ಬಳಸಬೇಕು? ಎನ್ನುವ ವಿವೇಕದಿಂದ ಮಾತ್ರ ಶೂರ, ವೀರ, ಧೀರ ಆಗಲು ಸಾಧ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಸೋಮವಾರ ಬೆಳಿಗ್ಗೆ ನಡೆದ ಚಿಂತನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.</p>.<p>‘ತಾಳ್ಮೆಯ ಸಂಸ್ಕಾರ ಸಿಗಬೇಕಾದದ್ದು ಮನಸ್ಸಿಗೆ. ಯಾರು ತನ್ನ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳು ವರೋ ಆ ವ್ಯಕ್ತಿ ತಾಳ್ಮೆ ಕಳೆದುಕೊಳ್ಳಲಾರರು. ವಿವೇಕ ಇಲ್ಲದವರು ಮಾತ್ರ ತಾಳ್ಮೆ ಕಳೆದುಕೊಳ್ಳುವರು. ಸಹನೆ ಯಿಂದಲೇ ಹೃದಯ ಶ್ರೀಮಂತಿಕೆಯೂ ಹೆಚ್ಚುವುದು’ ಎಂದು ಹೇಳಿದರು.</p>.<p>‘ಸಹನೆ’ ಕುರಿತು ಮಾತನಾಡಿದ ಸಾಣೇಹಳ್ಳಿಯ ಚಿಂತಕ ಸಾ.ನಿ.ರವಿಕುಮಾರ್, ‘ಇಂದಿನ ಮಕ್ಕಳೇ, ನಾಳಿನ ಪ್ರಜೆಗಳು ಎನ್ನುವ ಮಾತಿದೆ. ಆದರೆ, ಮಕ್ಕಳು ಕೇವಲ ವಯಸ್ಸಿನ ಕಾರಣಕ್ಕೆ ಪ್ರಜೆಗಳಾದರೆ ಸಾಲದು, ಅವರು ಸತ್ಪ್ರಜೆಗಳಾಗಬೇಕು ಎಂಬುದು ಪಂಡಿತಾರಾಧ್ಯ ಶ್ರೀಗಳ ಆಶಯ. ಗಾಂಧೀಜಿಯವರು ತಮ್ಮ ತಾಳ್ಮೆ, ಸಹನೆಗಳಿಂದಲೇ ಮಹಾತ್ಮರಾದುದು’ ಎಂದರು.</p>.<p>ಶಿವಸಂಚಾರದ ನಾಗರಾಜ್ ಸಾಣೇಹಳ್ಳಿ, ವಿದ್ಯಾರ್ಥಿ ಗಳಾದ ಸುಪ್ರಭೆ, ಮುಕ್ತಾ ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಮಂತ್ರ ಲೇಖನ ಬರೆಯಲಾಯಿತು. ಅಧ್ಯಾಪಕ ಸಂತೋಷ್ ಕಾರ್ಯಕ್ರಮ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>