ವೇದಾವತಿ ನದಿಗೆ ನಿರ್ಮಿಸಿದ ಚೆಕ್ಡ್ಯಾಂ ಸಮೀಪದಲ್ಲೇ ಚಿಕ್ಕಣ್ಣ ಅವರ ಜಮೀನು ಇದೆ. ವಿಪರೀತ ಮಳೆಗೆ ಬ್ಯಾರೇಜ್ ಒಡೆದು ಜಮೀನಿಗೆ ನೀರು ನುಗ್ಗಿತ್ತು. ಒಂದು ಎಕರೆಯಲ್ಲಿದ್ದ 50ಕ್ಕೂ ಹೆಚ್ಚು ತೆಂಗಿನ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಪಕ್ಕದ ಶಾರದಮ್ಮ ಎಂಬುವರ ಜಮೀನಿನ 20 ತೆಂಗಿನ ಮರಗಳು ಕೂಡ ನಾಶವಾಗಿದ್ದವು. ಚಿಕ್ಕಣ್ಣ ಅವರಿಗೆ ₹ 5,940 ಹಾಗೂ ಶಾರದಮ್ಮ ಅವರಿಗೆ ₹ 1,500 ಪರಿಹಾರ ವಿತರಣೆ ಮಾಡಲಾಗಿದೆ.