<p><strong>ಚಿತ್ರದುರ್ಗ:</strong> ಚೀನಾ ವಸ್ತುಗಳನ್ನು ಮಾರಾಟ ಮಾಡಬೇಡಿ ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಕಾರ್ಯಕರ್ತರು ನಗರದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಗುರುವಾರ ಕರಪತ್ರ ಹಂಚಿ ಮನವಿ ಮಾಡಿದರು.</p>.<p>ಚೀನಾ ವಸ್ತು ಮಾರಾಟ ಮಾಡದಂತೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿ ಮುಂದೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.</p>.<p>ಚೀನಾ ಕುತಂತ್ರಕ್ಕೆ ಭಾರತದ ಯೋಧರು ಹುತಾತ್ಮರಾಗಿದ್ದಾರೆ. ಒಂದಿಲ್ಲೊಂದು ರೀತಿ ಷಡ್ಯಂತ್ರ ರೂಪಿಸುವ ಚೀನಾ, ಭಾರತದ ವಿರುದ್ಧ ಹಗೆ ಸಾಧಿಸುತ್ತಿದೆ. ಹೀಗಾಗಿ, ಚೀನಾದಲ್ಲಿ ಉತ್ಪಾದನೆ ಮಾಡುವ ವಸ್ತುಗಳನ್ನು ಬಹಿಷ್ಕರಿಸಿ ಎಂದು ಒತ್ತಾಯಿಸಿದರು.</p>.<p>ಚೀನಾ ಉತ್ಪಾದಿತ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡುವುದರಿಂದ ಆ ದೇಶ ಸದೃಢವಾಗಲಿದೆ.ದೇಶದ ಪ್ರಜೆಗಳು ಜಾಗೃತರಾಗಬೇಕು. ಭವ್ಯ ಭಾರತ ಉಳಿಯಬೇಕು. ಅದಕ್ಕಾಗಿ ಚೀನಾ ವಸ್ತುಗಳನ್ನು ಖರೀದಿ ಮಾಡದಿರುವುದೇ ಸೂಕ್ತ. ದೇಶೀಯ ಉತ್ಪನ್ನಗಳನ್ನು ಉತ್ಪಾದಿಸಲು, ನಿರುದ್ಯೋಗಿ ಯುವಸಮೂಹಕ್ಕೆ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ ಎಂದರು.</p>.<p>ಮುಖಂಡರಾದ ಮಧುಪಾಲೇಗೌಡ, ಅಶೋಕ್ ನಾಯ್ಡು, ಸಂತೋಷ್, ನಿಖಿಲ್ಕುಮಾರ್, ಸಂದೀಪ್, ಸೈಯದ್ ಖುದ್ದೂಸ್, ಕರಿಯಪ್ಪ, ಸಾಹೀರ್, ರಫಿ ಇದ್ದರು.</p>.<p><span class="quote">ನವನಿರ್ಮಾಣ ಸೇನೆ ಖಂಡನೆ:</span>ಭಾರತೀಯ ಸೈನಿಕರನ್ನು ಹತ್ಯೆ ಮಾಡಿರುವ ಚೀನಾದ ಕ್ರಮವನ್ನು ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.</p>.<p>ಚೀನಾ ಸೈನಿಕರು ದಾಳಿ ನಡೆಸುವ ಮೂಲಕ ದೇಶದ ಸ್ವಾಭಿಮಾನ ಕೆಣಕಿದ್ದಾರೆ. ಕುತಂತ್ರಿಗಳಿಗೆ ತಕ್ಕ ಪಾಠ ಕಲಿಸಬೇಕಾದರೆ, ಅಲ್ಲಿನ ಯಾವುದೇ ವಸ್ತುಗಳನ್ನು ದೇಶದೊಳಗೆ ಪ್ರವೇಶಿಸದಂತೆ ಎಚ್ಚರವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.</p>.<p>ಮುಖಂಡರಾದ ಕೆ.ಟಿ.ಶಿವಕುಮಾರ್, ಎಂ. ಮಂಜುನಾಥ್, ಕೊಟ್ರೇಶ್, ನಾಗಣ್ಣ, ಹರೀಶ್, ಗೌರಣ್ಣ, ತಿಪ್ಪೇಸ್ವಾಮಿ, ಓಬಳೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಚೀನಾ ವಸ್ತುಗಳನ್ನು ಮಾರಾಟ ಮಾಡಬೇಡಿ ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಕಾರ್ಯಕರ್ತರು ನಗರದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಗುರುವಾರ ಕರಪತ್ರ ಹಂಚಿ ಮನವಿ ಮಾಡಿದರು.</p>.<p>ಚೀನಾ ವಸ್ತು ಮಾರಾಟ ಮಾಡದಂತೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿ ಮುಂದೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.</p>.<p>ಚೀನಾ ಕುತಂತ್ರಕ್ಕೆ ಭಾರತದ ಯೋಧರು ಹುತಾತ್ಮರಾಗಿದ್ದಾರೆ. ಒಂದಿಲ್ಲೊಂದು ರೀತಿ ಷಡ್ಯಂತ್ರ ರೂಪಿಸುವ ಚೀನಾ, ಭಾರತದ ವಿರುದ್ಧ ಹಗೆ ಸಾಧಿಸುತ್ತಿದೆ. ಹೀಗಾಗಿ, ಚೀನಾದಲ್ಲಿ ಉತ್ಪಾದನೆ ಮಾಡುವ ವಸ್ತುಗಳನ್ನು ಬಹಿಷ್ಕರಿಸಿ ಎಂದು ಒತ್ತಾಯಿಸಿದರು.</p>.<p>ಚೀನಾ ಉತ್ಪಾದಿತ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡುವುದರಿಂದ ಆ ದೇಶ ಸದೃಢವಾಗಲಿದೆ.ದೇಶದ ಪ್ರಜೆಗಳು ಜಾಗೃತರಾಗಬೇಕು. ಭವ್ಯ ಭಾರತ ಉಳಿಯಬೇಕು. ಅದಕ್ಕಾಗಿ ಚೀನಾ ವಸ್ತುಗಳನ್ನು ಖರೀದಿ ಮಾಡದಿರುವುದೇ ಸೂಕ್ತ. ದೇಶೀಯ ಉತ್ಪನ್ನಗಳನ್ನು ಉತ್ಪಾದಿಸಲು, ನಿರುದ್ಯೋಗಿ ಯುವಸಮೂಹಕ್ಕೆ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ ಎಂದರು.</p>.<p>ಮುಖಂಡರಾದ ಮಧುಪಾಲೇಗೌಡ, ಅಶೋಕ್ ನಾಯ್ಡು, ಸಂತೋಷ್, ನಿಖಿಲ್ಕುಮಾರ್, ಸಂದೀಪ್, ಸೈಯದ್ ಖುದ್ದೂಸ್, ಕರಿಯಪ್ಪ, ಸಾಹೀರ್, ರಫಿ ಇದ್ದರು.</p>.<p><span class="quote">ನವನಿರ್ಮಾಣ ಸೇನೆ ಖಂಡನೆ:</span>ಭಾರತೀಯ ಸೈನಿಕರನ್ನು ಹತ್ಯೆ ಮಾಡಿರುವ ಚೀನಾದ ಕ್ರಮವನ್ನು ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.</p>.<p>ಚೀನಾ ಸೈನಿಕರು ದಾಳಿ ನಡೆಸುವ ಮೂಲಕ ದೇಶದ ಸ್ವಾಭಿಮಾನ ಕೆಣಕಿದ್ದಾರೆ. ಕುತಂತ್ರಿಗಳಿಗೆ ತಕ್ಕ ಪಾಠ ಕಲಿಸಬೇಕಾದರೆ, ಅಲ್ಲಿನ ಯಾವುದೇ ವಸ್ತುಗಳನ್ನು ದೇಶದೊಳಗೆ ಪ್ರವೇಶಿಸದಂತೆ ಎಚ್ಚರವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.</p>.<p>ಮುಖಂಡರಾದ ಕೆ.ಟಿ.ಶಿವಕುಮಾರ್, ಎಂ. ಮಂಜುನಾಥ್, ಕೊಟ್ರೇಶ್, ನಾಗಣ್ಣ, ಹರೀಶ್, ಗೌರಣ್ಣ, ತಿಪ್ಪೇಸ್ವಾಮಿ, ಓಬಳೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>