<p>ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಆಗಸ್ಟ್ 1ರಿಂದ 3ರವರೆಗೆ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್ ಸ್ವಾಮೀಜಿ ಅವರ ಪುಣ್ಯಾರಾಧನೆ ನಡೆಯಲಿದೆ ಎಂದು ಅನಾಥ ಸೇವಾಶ್ರಮದ ವ್ಯವಸ್ಥಾಪಕ ಡಿ.ಕೆ. ಚಂದ್ರಪ್ಪ ತಿಳಿಸಿದ್ದಾರೆ.</p>.<p>ಪುಣ್ಯಾರಾಧನೆ ಅಂಗವಾಗಿ ಮಂದಿರದ ಶತ ರುದ್ರಾಭಿಷೇಕ ನಡೆಯಲಿದೆ. ಮಲ್ಲಾಡಿಹಳ್ಳಿಗೆ ರಾಘವೇಂದ್ರ ಸ್ವಾಮೀಜಿ ಅವರ ಕೊಡುಗೆಯ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಭಕ್ತಿಗೀತೆಗಳ ಗೀತ ಗಾಯನ ಸ್ಪರ್ಧೆಗಳು ನಡೆಯಲಿವೆ. ಆ.2ರ ಮಧ್ಯಾಹ್ನ 3.30ಕ್ಕೆ ಎಚ್.ಎಸ್.ಪ್ರಭಾಕರ್ ಅವರಿಂದ ಸ್ವಾಮೀಜಿಗಳ ಕುರಿತು ನುಡಿನಮನ ಕಾರ್ಯಕ್ರಮ ನಡೆಯಲಿದೆ. ಆ.3ರಂದು ಬೆಳಿಗ್ಗೆ 10ಕ್ಕೆ ಅನಾಥ ಸೇವಾಶ್ರಮದ ಭಕ್ತರಿಂದ ಭಜನಾ ಕಾರ್ಯಕ್ರಮ ಹಾಗೂ ಹೋಮ ಹವನ, ಅನ್ನಸಂತರ್ಪಣೆ ನಡೆಯಲಿದೆ.</p>.<p>ಕಾರ್ಯಕ್ರಮದಲ್ಲಿ ಅನಾಥ ಸೇವಾಶ್ರಮದ ಉಪಾಧ್ಯಕ್ಷ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ, ಉದ್ಯಮಿ ಕೆ.ನಾಗರಾಜ್, ವಿಶ್ವಸ್ತ ಸಮಿತಿಯ ಕಾರ್ಯದರ್ಶಿ ಎಸ್.ಕೆ. ಬಸವರಾಜನ್, ಆರ್ಥಿಕ ತಜ್ಞ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ, ಕೆ.ಡಿ. ಬಡಿಗೇರ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ಹಾಗೂ ಆಶ್ರಮದ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಆಗಸ್ಟ್ 1ರಿಂದ 3ರವರೆಗೆ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್ ಸ್ವಾಮೀಜಿ ಅವರ ಪುಣ್ಯಾರಾಧನೆ ನಡೆಯಲಿದೆ ಎಂದು ಅನಾಥ ಸೇವಾಶ್ರಮದ ವ್ಯವಸ್ಥಾಪಕ ಡಿ.ಕೆ. ಚಂದ್ರಪ್ಪ ತಿಳಿಸಿದ್ದಾರೆ.</p>.<p>ಪುಣ್ಯಾರಾಧನೆ ಅಂಗವಾಗಿ ಮಂದಿರದ ಶತ ರುದ್ರಾಭಿಷೇಕ ನಡೆಯಲಿದೆ. ಮಲ್ಲಾಡಿಹಳ್ಳಿಗೆ ರಾಘವೇಂದ್ರ ಸ್ವಾಮೀಜಿ ಅವರ ಕೊಡುಗೆಯ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಭಕ್ತಿಗೀತೆಗಳ ಗೀತ ಗಾಯನ ಸ್ಪರ್ಧೆಗಳು ನಡೆಯಲಿವೆ. ಆ.2ರ ಮಧ್ಯಾಹ್ನ 3.30ಕ್ಕೆ ಎಚ್.ಎಸ್.ಪ್ರಭಾಕರ್ ಅವರಿಂದ ಸ್ವಾಮೀಜಿಗಳ ಕುರಿತು ನುಡಿನಮನ ಕಾರ್ಯಕ್ರಮ ನಡೆಯಲಿದೆ. ಆ.3ರಂದು ಬೆಳಿಗ್ಗೆ 10ಕ್ಕೆ ಅನಾಥ ಸೇವಾಶ್ರಮದ ಭಕ್ತರಿಂದ ಭಜನಾ ಕಾರ್ಯಕ್ರಮ ಹಾಗೂ ಹೋಮ ಹವನ, ಅನ್ನಸಂತರ್ಪಣೆ ನಡೆಯಲಿದೆ.</p>.<p>ಕಾರ್ಯಕ್ರಮದಲ್ಲಿ ಅನಾಥ ಸೇವಾಶ್ರಮದ ಉಪಾಧ್ಯಕ್ಷ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ, ಉದ್ಯಮಿ ಕೆ.ನಾಗರಾಜ್, ವಿಶ್ವಸ್ತ ಸಮಿತಿಯ ಕಾರ್ಯದರ್ಶಿ ಎಸ್.ಕೆ. ಬಸವರಾಜನ್, ಆರ್ಥಿಕ ತಜ್ಞ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ, ಕೆ.ಡಿ. ಬಡಿಗೇರ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ಹಾಗೂ ಆಶ್ರಮದ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>