ತ್ಯಾಗರಾಜನಗರ, ವಾಲ್ಮೀಕಿನಗರ, ಚಿತ್ರಯ್ಯನಹಟ್ಟಿ, ಕಾಟಪ್ಪನಹಟ್ಟಿ, ಹಳೆಟೌನ್ ಸೇರಿದಂತೆ ನಗರದ ಎಲ್ಲ ಚರಂಡಿಯ ಕೊಳಚೆ ನೀರು ನಿಲ್ದಾಣದ ಬಳಿ ರಾಜಕಾಲುವೆಯ ಮೂಲಕ ನಗರಂಗೆರೆ ಕೆರೆಯ ಕಡೆಗೆ ಹರಿಯುತ್ತಿದೆ. ರೈಲ್ವೆ ಹಳಿ ಸಮೀಪದ ಹಾಳುಬಾವಿ ಕಸ, ಕಡ್ಡಿ, ಕೊಚ್ಚೆಯಿಂದ ತುಂಬಿ ಕೊಳೆತು ನಾರುತ್ತಿದೆ. ವಸತಿ ಗೃಹದ ಪಕ್ಕದ ಚರಂಡಿಯಲ್ಲಿ ಸದಾ ಹರಿಯುವ ಕೊಳಚೆ ನೀರು ನಿತ್ಯ ಓಡಾಡುವ ಜನರಲ್ಲಿ ಅಸಹ್ಯ ಹುಟ್ಟಿಸಿದೆ.