<p><strong>ಸಿರಿಗೆರೆ: </strong>ತಡರಾತ್ರಿ ಅರ್ಧ ಗಂಟೆ ಸುರಿದ ಮಳೆಗೆ ಸಿರಿಗೆರೆ ಸಮೀಪದ ಸೀಗೇಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಅವರ ಜಮೀನಿಗೆ ಹೊಂದಿಕೊಂಡಿರುವ ಚೆಕ್ಡ್ಯಾಂ ತುಂಬಿ ಹರಿದಿದೆ.</p>.<p>10 ಅಡಿ ಆಳ, 85 ಅಡಿ ವಿಸ್ತೀರ್ಣವಿರುವ ಚೆಕ್ಡ್ಯಾಂ ಈ ಹಿಂದೆ ಮಳೆಗಾಲದ ಸಮಯದಲ್ಲಿ ತುಂಬಿ ಹರಿದ ಕಾರಣ ಗ್ರಾಮದ ಹಿರಿಯರು ಮತ್ತು ಮುತ್ತೈದೆಯರು ಸ್ಥಳದಲ್ಲಿ ಗ್ರಾಮ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು.</p>.<p>ರಾತ್ರಿ ಸುರಿದ ಮಳೆಯಿಂದ ಕೆಲವು ರೈತರ ಮೆಕ್ಕೆಜೋಳದ ರಾಶಿ ನೆನೆದು ಹಾಳಾದರೆ; ಅಡಿಕೆ, ತೆಂಗು ತೋಟಗಳಿಗೆ ಹದ ಮಳೆಯಾಗಿದೆ.</p>.<p>ಒಂದೇ ದಿನದಲ್ಲಿ ಚೆಕ್ಡ್ಯಾಂ ತುಂಬಿರುವುದಕ್ಕೆ ಸುತ್ತಮುತ್ತಲ ಜಮೀನಿನ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಚೆಕ್ಡ್ಯಾಂನಲ್ಲಿ ನೀರು ಸಂಗ್ರಹವಾದರೆ ಅಂತರ್ಜಲ ಹೆಚ್ಚಾಗಿ ಸುಮಾರು ಹತ್ತು ಕಿ.ಮೀ. ದೂರದವರೆಗೂ ಬೋರ್ವೆಲ್ಗಳಲ್ಲಿ ನೀರು ಬರುತ್ತದೆ ಎನ್ನುವುದು ರೈತರ ಅಭಿಪ್ರಾಯ.</p>.<p>ಪಳಿಕೇಹಳ್ಳಿ ಮತ್ತು ಅಳಗವಾಡಿ ಗ್ರಾಮದ ಸಮೀಪವಿರುವ ಬೆಟ್ಟದ ಪ್ರದೇಶಕ್ಕೆ ಹೆಚ್ಚು ಮಳೆ ಸುರಿದರೆ ಚೆಕ್ಡ್ಯಾಂ ತುಂಬಿ ಹರಿಯುತ್ತದೆ. ಈ ನೀರು ಚೆಕ್ಡ್ಯಾಂನಿಂದ ಶಾಂತಿವನದ ಚೆಕ್ಡ್ಯಾಂ ಮೂಲಕ ಭರಮಸಾಗರ ಕೆರೆ ಸೇರುತ್ತದೆ.</p>.<p>ಹೊಸರಂಗಾಪುರ, ಹಳವುದರ, ಜಮ್ಮೇನಹಳ್ಳಿ, ಚಿಕ್ಕೇನಹಳ್ಳಿ, ಸೀಗೇಹಳ್ಳಿ, ಓಬವ್ವನಾಗ್ತಿಹಳ್ಳಿ, ದೊಡ್ಡಾಲಘಟ್ಟ, ಕೋಣನೂರು, ಕಡ್ಲೆಗುದ್ದು, ಹನುಮನಹಳ್ಳಿ, ಪುಡಕಲಹಳ್ಳಿ, ಡಿ.ಮೆದಕೇರಿಪುರ, ಅರಭಗಟ್ಟ ಪ್ರದೇಶಗಳಲ್ಲಿಯೂ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ: </strong>ತಡರಾತ್ರಿ ಅರ್ಧ ಗಂಟೆ ಸುರಿದ ಮಳೆಗೆ ಸಿರಿಗೆರೆ ಸಮೀಪದ ಸೀಗೇಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಅವರ ಜಮೀನಿಗೆ ಹೊಂದಿಕೊಂಡಿರುವ ಚೆಕ್ಡ್ಯಾಂ ತುಂಬಿ ಹರಿದಿದೆ.</p>.<p>10 ಅಡಿ ಆಳ, 85 ಅಡಿ ವಿಸ್ತೀರ್ಣವಿರುವ ಚೆಕ್ಡ್ಯಾಂ ಈ ಹಿಂದೆ ಮಳೆಗಾಲದ ಸಮಯದಲ್ಲಿ ತುಂಬಿ ಹರಿದ ಕಾರಣ ಗ್ರಾಮದ ಹಿರಿಯರು ಮತ್ತು ಮುತ್ತೈದೆಯರು ಸ್ಥಳದಲ್ಲಿ ಗ್ರಾಮ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು.</p>.<p>ರಾತ್ರಿ ಸುರಿದ ಮಳೆಯಿಂದ ಕೆಲವು ರೈತರ ಮೆಕ್ಕೆಜೋಳದ ರಾಶಿ ನೆನೆದು ಹಾಳಾದರೆ; ಅಡಿಕೆ, ತೆಂಗು ತೋಟಗಳಿಗೆ ಹದ ಮಳೆಯಾಗಿದೆ.</p>.<p>ಒಂದೇ ದಿನದಲ್ಲಿ ಚೆಕ್ಡ್ಯಾಂ ತುಂಬಿರುವುದಕ್ಕೆ ಸುತ್ತಮುತ್ತಲ ಜಮೀನಿನ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಚೆಕ್ಡ್ಯಾಂನಲ್ಲಿ ನೀರು ಸಂಗ್ರಹವಾದರೆ ಅಂತರ್ಜಲ ಹೆಚ್ಚಾಗಿ ಸುಮಾರು ಹತ್ತು ಕಿ.ಮೀ. ದೂರದವರೆಗೂ ಬೋರ್ವೆಲ್ಗಳಲ್ಲಿ ನೀರು ಬರುತ್ತದೆ ಎನ್ನುವುದು ರೈತರ ಅಭಿಪ್ರಾಯ.</p>.<p>ಪಳಿಕೇಹಳ್ಳಿ ಮತ್ತು ಅಳಗವಾಡಿ ಗ್ರಾಮದ ಸಮೀಪವಿರುವ ಬೆಟ್ಟದ ಪ್ರದೇಶಕ್ಕೆ ಹೆಚ್ಚು ಮಳೆ ಸುರಿದರೆ ಚೆಕ್ಡ್ಯಾಂ ತುಂಬಿ ಹರಿಯುತ್ತದೆ. ಈ ನೀರು ಚೆಕ್ಡ್ಯಾಂನಿಂದ ಶಾಂತಿವನದ ಚೆಕ್ಡ್ಯಾಂ ಮೂಲಕ ಭರಮಸಾಗರ ಕೆರೆ ಸೇರುತ್ತದೆ.</p>.<p>ಹೊಸರಂಗಾಪುರ, ಹಳವುದರ, ಜಮ್ಮೇನಹಳ್ಳಿ, ಚಿಕ್ಕೇನಹಳ್ಳಿ, ಸೀಗೇಹಳ್ಳಿ, ಓಬವ್ವನಾಗ್ತಿಹಳ್ಳಿ, ದೊಡ್ಡಾಲಘಟ್ಟ, ಕೋಣನೂರು, ಕಡ್ಲೆಗುದ್ದು, ಹನುಮನಹಳ್ಳಿ, ಪುಡಕಲಹಳ್ಳಿ, ಡಿ.ಮೆದಕೇರಿಪುರ, ಅರಭಗಟ್ಟ ಪ್ರದೇಶಗಳಲ್ಲಿಯೂ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>