ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಅಧಿಕ ಮಳೆಯಿಂದಾಗಿ ಸಂಪೂರ್ಣವಾಗಿ ನಷ್ಟವಾಗಿದ್ದರಿಂದ ಹೋಬಳಿಯ ಅನೇಕ ರೈತರು ಮೆಕ್ಕೆಜೋಳವನ್ನು ಅಳಿಸಿ, ಮತ್ತೆ ಮೆಕ್ಕೆಜೋಳ, ರಾಗಿ, ಹುರುಳಿ ಮತ್ತಿತರ ಅಲ್ಪ ಕಾಲಾವಧಿಯ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ವಾರದಿಂದ ಮಳೆ ಬಿಡುವು ನೀಡಿದ್ದರಿಂದ, ಹೊಸದಾಗಿ ಬಿತ್ತನೆ ಮಾಡಿದ್ದ ಸಸಿಗಳಿಗೆ ಮಳೆ ಅಗತ್ಯವಿತ್ತು.