ಜಾತ್ರೆಗೆ ತುಮಕೂರು, ಬಳ್ಳಾರಿ, ದಾವಣಗೆರೆ, ಆಂಧ್ರಪ್ರದೇಶ, ತಮಿಳುನಾಡುಗಳಿಂದ ಲಕ್ಷಾಂತರ ಭಕ್ತರು ಎತ್ತಿನ ಗಾಡಿಗಳಲ್ಲಿ ಬರುತ್ತಾರೆ. ದವನ, ಮಂಡಕ್ಕಿ, ಬಾಳೆಹಣ್ಣು, ಹೂವು, ಲೋಹದ ಹಾವು-ಚೇಳನ್ನು ಅರ್ಪಿಸುವುದು ವಾಡಿಕೆ. ಚರ್ಮರೋಗ ಸಂಬಂಧ ಕಾಯಿಲೆ ಇರುವವರು, ಹಾವು ಚೇಳಿನ ಭಯ ಇರುವವರು ಸ್ವಾಮಿಗೆ ಲೋಹದ ಹಾವು–ಚೇಳು ಅರ್ಪಿಸಿದರೆ ಕಾಯಿಲೆ ಹಾಗೂ ಭಯ ನಿವಾರಣೆ ಆಗುತ್ತದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.