ಭಕ್ತರಿಗೆ ಕಾಯಿ, ಬಾಳೆಹಣ್ಣು, ಮಂಡಕ್ಕಿಯ ಪ್ರಸಾದ ವಿತರಿಸಲಾಯಿತು. ಸಂಜೆ ರಂಗನಾಥಸ್ವಾಮಿ, ತಾಳಕಟ್ಟದ ಕರಿಯಮ್ಮ ದೇವಿ ಹಾಗೂ ಬಸವೇಶ್ವರ ಸ್ವಾಮಿಯ ದೊಡ್ಡೆಡೆ ಸೇವೆ ನಡೆಯಿತು. ಜಾತ್ರೆಯಲ್ಲಿ ಹೂವಿನ ಪಲ್ಲಕ್ಕಿ ಉತ್ಸವ, ಕುದುರೆ ಪೂಜೆ, ಕಳಸ ಪೂಜೆ, ಬಿಲ್ಲುಗೂಡು ಹಾಕುವುದು ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.