‘ಕೃಷ್ಣಾ ಮೇಲ್ದಂಡೆ, ಶರಾವತಿ, ಹಾರಂಗಿ, ಕಾಳಿ ಸೇರಿ ನೀರಾವರಿ ಯೋಜನೆ ಹಾಗೂ ಎನ್ಜಿಇಎಫ್ ಕೈಗಾರಿಕೆ ಒಳಗೊಂಡಂತೆ ಅನೇಕ ಸಂಸ್ಥೆ ಸ್ಥಾಪಿಸಿದರು. ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಿದರು. ಜಾತ್ಯಾತೀತ ನಿಲುವು ಹೊಂದಿದ್ದ ಅವರು, ಮಹಮ್ಮದ್ ಆಲಿಯನ್ನು ಸಚಿವರನ್ನಾಗಿ ಮಾಡಿದರು. ಕಾಂಗ್ರೆಸ್ನಲ್ಲಿ ಅತ್ಯುನ್ನತ ಸ್ಥಾನಮಾನ ಗಳಿಸಿದರು ಕೂಡ ದರ್ಪ ತೋರಿಸಲಿಲ್ಲ. ಇಂತಹ ಸತ್ಯನಿಷ್ಠ ರಾಜಕಾರಣಿ ಕುರಿತು ಮಕ್ಕಳು ಮತ್ತು ಯುವಸಮೂಹಕ್ಕೆ ಪರಿಚಯಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.