ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘12ನೇ ಶತಮಾನ ವಿಶ್ವದ ಇತಿಹಾಸದಲ್ಲೇ ಅವಿಸ್ಮರಣೀಯ. ಶರಣರು ಬಸವಕಲ್ಯಾಣದ ಅನುಭವ ಮಂಟಪದ ಮೂಲಕ ಏರುಪೇರುಗಳಿಲ್ಲದ, ಸರ್ವಸಮಾನತೆಯ, ಸಕಲ ಜೀವಾತ್ಮರ ಒಳಿತು ಬಯಸುವ ಕಾರ್ಯ ಮಾಡಿದರು. ಅದರಿಂದಾಗಿಯೇ ಬಸವಕಲ್ಯಾಣ ಆಕರ್ಷಣೆಯ ಕೇಂದ್ರವಾಗಿತ್ತು. ಅಲ್ಲಿ ರಾಜ–ಪ್ರಜೆ, ಆಳು–ಅರಸ, ಬಡವ–ಶ್ರೀಮಂತ, ಅಧಿಕಾರಿ–ಸೇವಕ ಎನ್ನುವ ಅಂತರಗಳಿರಲಿಲ್ಲ. ಶರಣರು ಶೋಷಣೆ, ಲಿಂಗತಾರತಮ್ಯ, ಅಸಮಾನತೆ, ಪಟ್ಟಭದ್ರಹಿತಾಸಕ್ತಿ, ಪುರೋಹಿತಶಾಹಿಯ ವಿರುದ್ಧ ಸಿಡಿದೆದ್ದವರು. ಅವರಿಗೆ ಆಚಾರ, ಕಾಯಕ, ಸಮಾನತೆ ಮುಖ್ಯವಾಗಿತ್ತು. ಇವೆಲ್ಲವನ್ನೂ ಜನರಿಗೆ ತಿಳಿಯಪಡಿಸುವ ಸದಾಶಯವೇ ಮತ್ತೆ ಕಲ್ಯಾಣ’ ಎಂದರು.