ತಾಲ್ಲೂಕಿನ ಕೊಂಡ್ಲಹಳ್ಳಿ, ಮೊಳಕಾಲ್ಮುರು, ನೆರೆಯ ರಾಯದುರ್ಗ ರೇಷ್ಮೆಸೀರೆ ನೇಯ್ಗೆಗೆ ಪ್ರಸಿದ್ಧ. 5 ಸಾವಿರಕ್ಕೂ ಹೆಚ್ಚು ಮಗ್ಗಳಿದ್ದವು. ಜಾಗತೀಕರಣದ ಪರಿಣಾಮ ಸಾವಿರ ಆಸುಪಾಸಿನಲ್ಲಿ ಮಗ್ಗಗಳಿವೆ. ಕಚ್ಚಾ ವಸ್ತುಗಳಾದ ಸಿದ್ಧ ರೇಷ್ಮೆತಡಿ, ಜರಿಯ ಕೊರತೆಯಿಂದಾಗಿ ನೇಯ್ಗೆ ಸ್ಥಗಿತವಾಗಿದೆ. ಲಾಕ್ಡೌನ್ ಘೋಷಣೆಗೆ ಮುಂಚಿತವಾಗಿ ದಾಸ್ತಾನು ಮಾಡಿದ್ದ ಕಚ್ಚಾವಸ್ತು ಕೊನೆಯಾಗುವ ತನಕ ಮಾತ್ರ ಮಗ್ಗದ ಸದ್ದು ಕೇಳಿಸಿತು. ಈಗ ಸಂಪೂರ್ಣ ಸ್ಥಬ್ಧವಾಗಿದೆ ಎನ್ನುತ್ತಾರೆ ನೇಕಾರ ಪಿ.ಎನ್. ಶ್ರೀನಿವಾಸುಲು.