ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಭೋವಿ ಜನಾಂಗದ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಮತ್ತು ನಿರ್ದೇಶಕರನ್ನು ನೇಮಕ ಮಾಡಬೇಕು. ಸಿದ್ಧರಾಮೇಶ್ವರರ ಅಧ್ಯಯನ ಪೀಠ, ಭೋವಿ ಸಂಸ್ಕೃತಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಕಟ್ಟಡ ಕಾರ್ಮಿಕರು, ರಸ್ತೆ, ಚರಂಡಿ ಕಾರ್ಮಿಕರು, ವಡ್ಡರ ಸಮೀಕ್ಷೆ ನಡೆಸಬೇಕು. ಕಲ್ಲು, ಗಣಿಗಾರಿಕೆ ಕೆಲಸ ಮಾಡುವವರಿಗೆ ಯಂತ್ರಖರೀದಿಯಲ್ಲಿ ಶೇ 75ರಷ್ಟು ಸಹಾಯಧನ ಒದಗಿಸಬೇಕು’ ಎಂದು ಮನವಿ ಮಾಡಿದರು.