ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ವಾಮಾಚಾರಕ್ಕೆ ವಿಷಪ್ರಾಶನ ಮಾಡಿದ ಶಂಕೆ ವ್ಯಕ್ತವಾಗಿದೆ.
ನನ್ನಿವಾಳ ಗ್ರಾಮದ ಇಂದ್ರಪ್ಪ ಮತ್ತು ಕಾವೇರಿ ದಂಪತಿಯ ಪುತ್ರ ಓಬಳೇಶ್ (5) ಹಾಗೂ ಪುತ್ರಿ ಬಿಂದು (3) ಮೃತರು.
ದೇವರ ತೀರ್ಥದ ನೆಪದಲ್ಲಿ ತಾತ ದುರುಗಪ್ಪ ಹಾಗೂ ಅಜ್ಜಿ ರೇಣುಕಾ ವಿಷವುಣಿಸಿದ್ದಾರೆ. ಮೊಮ್ಮಕ್ಕಳಿಗೆ ವಿಷ ಉಣಿಸಿದ ವಿಚಾರವಾಗಿ ಶನಿವಾರ ಬೆಳಿಗ್ಗೆ ಗಲಾಟೆ ನಡೆಯುತ್ತಿದ್ದ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.