ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಉಸಿರಿರೊವರೆಗೂ ಶ್ರೀಗಳೇ ಪೀಠಾಧಿಪತಿ: ತರಳಬಾಳು ಬೃಹನ್ಮಠದ ಭಕ್ತರ ಒಕ್ಕೊರಲ ಒತ್ತಾಯ

ದಾವಣಗೆರೆಯಲ್ಲಿ ನಡೆದ ಸಭೆ ಅನಧಿಕೃತ, ನಿವೃತ್ತಿ ಘೋಷಣೆ ಬೇಡ; ತರಳಬಾಳು ಬೃಹನ್ಮಠದ ಭಕ್ತರ ಒಕ್ಕೊರಲ ಒತ್ತಾಯ
Published : 5 ಆಗಸ್ಟ್ 2024, 23:42 IST
Last Updated : 5 ಆಗಸ್ಟ್ 2024, 23:42 IST
ಫಾಲೋ ಮಾಡಿ
Comments
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಬೃಹನ್ಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಾಧು ಸದ್ಧರ್ಮ ವೀರಶೈವ ಸಂಘದ ಪದಾಧಿಕಾರಿಗಳಾದ ಮೂಗಪ್ಪ ಕೆ.ಜಿ.ಬಸವನಗೌಡ ಹರಪನಹಳ್ಳಿ ಬಿ ಮಂಜುನಾಥ್‌ ಅಮರಾವತಿ ಪರಮೇಶ್ವರಪ್ಪ ಉಪಸ್ಥಿತರಿದ್ದರು 
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಬೃಹನ್ಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಾಧು ಸದ್ಧರ್ಮ ವೀರಶೈವ ಸಂಘದ ಪದಾಧಿಕಾರಿಗಳಾದ ಮೂಗಪ್ಪ ಕೆ.ಜಿ.ಬಸವನಗೌಡ ಹರಪನಹಳ್ಳಿ ಬಿ ಮಂಜುನಾಥ್‌ ಅಮರಾವತಿ ಪರಮೇಶ್ವರಪ್ಪ ಉಪಸ್ಥಿತರಿದ್ದರು 
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಬೃಹನ್ಮಠದ ಆವರಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಬೃಹನ್ಮಠದ ಆವರಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ
ಸಂವಿಧಾನವೇ ಬದಲಾಗಿದೆ
‘ಸಂವಿಧಾನವೇ ಹಲವು ಬಾರಿ ಬದಲಾಗಿದೆ. ಹೀಗಿರುವಾಗ ಮಠದ ಬೈಲಾವನ್ನು ಬದಲಾವಣೆ ಮಾಡಲು ಏಕೆ ಸಾಧ್ಯವಿಲ್ಲ? ಮಠದ ಕಟ್ಟಡವೊಂದರಲ್ಲಿ ಖಾನಾವಳಿ ನಡೆಸುತ್ತಿದ್ದ ರಾಜಣ್ಣ ಈಗ ರೆಸಾರ್ಟ್‌ ಮಾಡಿಕೊಂಡು ಅಲ್ಲಿಂದಲೇ ಶ್ರೀಗಳ ವಿರುದ್ಧ ಮುಖಂಡರನ್ನು ಎತ್ತಿಕಟ್ಟುತ್ತಿದ್ದಾರೆ’ ಎಂದು ಮಠದ ಭಕ್ತ ಶ್ರೀಧರ್‌ ಆಕ್ರೋಶ ವ್ಯಕ್ತಪಡಿಸಿದರು. ‘ಸೂಟ್‌ಕೇಸ್‌ ರಾಜಕಾರಣ ಮಾಡುತ್ತಿರುವ ಬಿ.ಸಿ.ಪಾಟೀಲ್‌ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಜಂಪಿಂಗ್‌ ಸ್ಟಾರ್‌ ಆಗಿದ್ದಾರೆ. ಮಠದ ವಿರುದ್ಧ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ’ ಎಂದು ಭಕ್ತ ಜಯಪ್ರಕಾಶ್‌ ಕಿಡಿಕಾರಿದರು. 
ನಿವೃತ್ತಿ ಘೋಷಿಸಲು ನಾನು ಸರ್ಕಾರಿ ನೌಕರನಲ್ಲ: ಸ್ವಾಮೀಜಿ
‘ಕೆಲವರು ಹೇಳಿದ ಕೂಡಲೇ ನಿವೃತ್ತಿ ಘೋಷಣೆ ಮಾಡಲು ನಾನು ಸರ್ಕಾರಿ ನೌಕರನಲ್ಲ. ಸರ್ಕಾರ ನನ್ನನ್ನು ನೇಮಿಸಿಲ್ಲ. 60 ವರ್ಷವಾದ ನಂತರ ನಿವೃತ್ತಿ ಘೋಷಣೆ ಮಾಡಬೇಕು ಎಂದು ಬೈಲಾ ಹೇಳಿಲ್ಲ. ನನಗೆ ಗಡುವು ನೀಡಲು ಅವರು ಯಾರು? ರೆಸಾರ್ಟ್‌ನಲ್ಲಿ ನಡೆಸಿದ ಸಭೆಗೆ ನಾನು ಪ್ರಾಮುಖ್ಯತೆ ನೀಡುವುದಿಲ್ಲ. ಆ.18ರಂದು ಪಾದಯಾತ್ರೆಯಲ್ಲಿ ಬಂದರೂ ನಾನು ಅವರನ್ನು ಖಾಸಗಿಯಾಗಿ ಭೇಟಿಯಾಗುವುದಿಲ್ಲ’ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದರು. ‘ದೊಡ್ಡಗುರುಗಳಾದ ಶಿವಕುಮಾರ ಸ್ವಾಮೀಜಿಗಳ ಮುಂದೆ ಸಮಸ್ಯೆ ಬೆಟ್ಟದಷ್ಟಿತ್ತು. ವೈಯಕ್ತಿಕ ಕಾರಣ ನೀಡಿ ಅವರು 60ನೇ ವಯಸ್ಸಿಗೆ ಪೀಠ ತ್ಯಾಗ ಮಾಡಿದರು. ಆದರೆ ನನ್ನ ಮುಂದೆ ಗುಲಗಂಜಿಯಷ್ಟೂ ಸಮಸ್ಯೆ ಇಲ್ಲ. 1923ರಲ್ಲಿ ಆಗಿರುವ ಬೈಲಾ ಸಾಧು ಸದ್ಧರ್ಮ ವೀರಶೈವ ಸಂಘದ ಬೈಲಾ ಅದು ಮಠದ ಬೈಲಾ ಅಲ್ಲ’ ಎಂದರು. ‘1977ರಲ್ಲಿ ದೊಡ್ಡಗುರುಗಳು ಬೈಲಾ ಪರಿಷ್ಕರಣೆ ಮಾಡಿದರು. ಅದರಂತೆ ಪೀಠಾಧಿಪತಿ ಬದಲಾವಣೆಗೆ ಹೆಚ್ಚು ಪ್ರಸರಣವುಳ್ಳ ಕನ್ನಡ ದಿನಪತ್ರಿಕೆಗೆ ಜಾಹೀರಾತು ನೀಡಿ ಸಂದರ್ಶನ ಮಾಡಿ ಶ್ರೀಗಳನ್ನು ಆಯ್ಕೆ ಮಾಡಬೇಕು ಎಂದು ಪರಿಷ್ಕರಿಸಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವೇ? ಹಾಗೆ ಮಾಡಿದರೆ ಯಾರೆಲ್ಲಾ ಅರ್ಜಿ ಹಾಕಬಹುದು ಎಂದು ನೀವೇ ಯೋಚಿಸಿ. ಹೀಗಾಗಿ ಆ ಅಂಶವನ್ನು ಮಾತ್ರ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ’ ಎಂದು ತಿಳಿಸಿದರು. ‘ಮಠದ ಚಟುವಟಿಕೆಗಳನ್ನು ತೆರಿಗೆ ವಿನಾಯಿತಿ ವ್ಯಾಪ್ತಿಗೆ ತರುವ ಉದ್ದೇಶದಿಂದ 1990ರಲ್ಲಿ ಡೀಡ್‌ ಮಾಡಲಾಯಿತು. ಅದನ್ನು ಆಡಳಿತ ಮಂಡಳಿ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಆದರೂ ಅದನ್ನು ಪ್ರಶ್ನಿಸುತ್ತಿರುವುದು ಏಕೆ? ಏನೇ ಅಸಮಾಧಾನವಿದ್ದರೂ ಸದ್ಧರ್ಮ ವೀರಶೈವ ಸಂಘಕ್ಕೆ ದೂರು ಕೊಡಲಿ. ಅದನ್ನು ಬಿಟ್ಟು ಖಾಸಗಿ ರೆಸಾರ್ಟ್‌ನಲ್ಲಿ ಮಾತನಾಡುವುದಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT