ಪೂರ್ವಯೋಜನೆಯಂತೆ ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮ ಕಾರ್ಯಕ್ರಮವನ್ನು 2022ರ ಫೆ. 8ರಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಆ ಭಾಗದ ಜನರಿಗೆ ತಿಳಿಸಲಾಗಿದೆ. ಜನವರಿ ವೇಳೆಗೆ ಓಮೈಕ್ರಾನ್ ಹೆಚ್ಚುವ ಸೂಚನೆ ಇದ್ದು, ಅನುಮತಿ ದೊರೆತರೆ ಮಾತ್ರ ಕಾರ್ಯಕ್ರಮ ನಡೆಸಲಾಗುವುದು. ಸರ್ಕಾರದ ಆದೇಶಕ್ಕೆ ಮೀರಿ ಕಾರ್ಯಕ್ರಮ ಹಮ್ಮಿಕೊಳ್ಳುವುದಿಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.