ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಅನುಭವ ಮಂಟಪದ ಪರಿಕಲ್ಪನೆಯಲ್ಲೇ ಸರ್ವ ಸಮುದಾಯಗಳಿಗೂ ಸ್ವಾಮೀಜಿಗಳನ್ನು ನೀಡಿ, ಸಂಘಟಿತರಾಗಲು ಮುರುಘಾ ಶರಣರು ಕಾರಣೀಭೂತರು. ಈ ವೇಳೆ ಎದುರಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರು. ವರ್ಣ–ವರ್ಗ ಎಲ್ಲವನ್ನೂ ಒಳಗೊಂಡಿರುವ ಪ್ರಸ್ತುತ ಸಮಾಜದಲ್ಲಿ ಜಾತ್ಯತೀತ ನಿಲುವನ್ನು ತಳೆಯಲು ಎದೆಗಾರಿಕೆ ಬೇಕು. ಅಂತಹ ಗಟ್ಟಿತನ ಶರಣರಲ್ಲಿ ಇದೆ. ಹೀಗಾಗಿ ಬಸವಾದಿ ಶರಣರ ಆಶಯ ಈಡೇರಿಸಲು ಪಣತೊಟ್ಟು ನಿಂತಿದ್ದಾರೆ’ ಎಂದು ಬಣ್ಣಿಸಿದರು.