‘ರವಿಶಂಕರ್ ಮತ್ತು ನಾನು 7ನೇ ತರಗತಿಯಿಂದ ಸಹಪಾಠಿಗಳು. ಮಲ್ಲಾಡಿಹಳ್ಳಿಯಲ್ಲಿ ಜತೆಗೇ ಪ್ರೌಢಶಾಲೆ, ಪಿಯುಸಿ ಓದಿದ್ದೆವು. ಅವನಿಗೆ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿ ಬಗ್ಗೆ ಹೆಚ್ಚು ಪ್ರೀತಿ ಗೌರವ ಇತ್ತು. ಅವರ ಸಾಧನೆಗಳ ಕುರಿತಂತೆ ಮೊದಲ ವ್ಯಕ್ತಿಯಾಗಿ ಪಿಎಚ್.ಡಿ ಮಾಡಿದ್ದ. ಸಂಶೋಧನೆಗೆ ನಾನೂ ಪ್ರೇರಣೆ ನೀಡುತ್ತಿದ್ದೆ. ಅವನ ಜೀವನದ ಬಹುದೊಡ್ಡ ಕನಸು ಈಡೇರುವ ಮುನ್ನವೇ ಮರಣ ಹೊಂದಿದ್ದು ಬೇಸರ ತರಿಸಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ತಾರಾನಾಥ್ ಬೇಸರ ವ್ಯಕ್ತಪಡಿಸಿದರು.