ಕಂಪನಿಯ ಪರವಾಗಿ ಸ್ಥಳದಲ್ಲಿದ್ದ ಚಂದ್ರಶೇಖರ್ ಅವರು, ‘ಶಾಸಕರು ಹೇಳಿದಂತೆ ರಸ್ತೆ ನಿರ್ಮಿಸುವ ಸಂಬಂಧ ಕಂಪನಿ ಜತೆ ಮಾತನಾಡುತ್ತೇನೆ. ಅವರನ್ನು ಹೆದರಿಸಲು ರೌಡಿಗಳನ್ನು ಕರೆಸಿಲ್ಲ. ಸಮೀಪದಲ್ಲೇ ಚಿತ್ರೀಕರಣ ನಡೆಯುತ್ತಿತ್ತು. ಆ ಹುಡುಗರು ನನ್ನ ಹಿಂದೆ ಬಂದಿದ್ದಾರೆ’ ಎಂದು ಶಾಸಕರು ಹಾಗೂ ಪೊಲೀಸರಿಗೆ ಸಮಜಾಯಿಷಿ ನೀಡಿದರು.