ಭರಮಸಾಗರ: ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಭಾನುವಾರ ವಿಶೇಷ ಸಂತೆ ನಡೆಯಿತು. ಪ್ರತಿ ಮಂಗಳವಾರ ನಡೆಯುತ್ತಿದ್ದ ವಾರದ ಸಂತೆಹಬ್ಬದ ಅಂಗವಾಗಿ ಭಾನುವಾರ ನಡೆಯಿತು.
ಹೋಬಳಿ ವ್ಯಾಪ್ತಿಯ ಹಳ್ಳಿಗಳು ಸೇರಿ ಬಿಳಿಚೋಡು, ಬಿದರಿಕೆರೆಯಿಂದ ವಾರದ ಸಂತೆಗೆ ಜನರು ಬಂದರು.
ಬರದ ನಡುವೆಯೂ ಗ್ರಾಮೀಣ ಜನರು ಉತ್ಸಾಹದಿಂದ ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು, ಆಹಾರ ಪದಾರ್ಥ ಖರೀದಿಸಿದರು. ಕಿರಾಣಿ, ಬಟ್ಟೆ ಅಂಗಡಿಗಳು ಜನದಟ್ಟಣೆಯಿಂದ ಕೂಡಿದ್ದವು. ಕಷ್ಟ, ಸುಖ ಎನ್ನುವುದು ಬೇವು–ಬೆಲ್ಲ ಇದ್ದಂತೆ.
‘ಬರಗಾಲ ಇದೆ. ಕಷ್ಟ ಎಂದು ಹಬ್ಬ ಮಾಡುವುದು ಬಿಡಲಾಗುತ್ತದೆಯೇ. ಅದ್ದೂರಿಯಾಗಿ ಅಲ್ಲದಿದ್ದರೂ ಸಂಪ್ರದಾಯಕ್ಕೆ ಅಗತ್ಯವಾದದ್ದನ್ನು ಖರೀದಿಸಬೇಕು. ಹೊಸ ವರ್ಷದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ಭಾವನೆಯೊಂದಿಗೆ ಹಬ್ಬ ಆಚರಿಸಬೇಕು’ ಎಂದು ಗ್ರಾಮದ ಚನ್ನಪ್ಪ ಹೇಳಿದರು.
ಭರಮಸಾಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಭಾನುವಾರ ವಿಶೇಷ ಸಂತೆ ನಡೆಯಿತು.