ವಚನ ಸಂವಿಧಾನ ಕೃತಿ ಲೋಕಾರ್ಪಣೆಗೊಳಿಸಿದ ದಾವಣಗೆರೆ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ದಾದಾಪೀರ್ ನವಿಲೇಹಾಳ್, ‘ಕರ್ನಾಟಕದ ಇತಿಹಾಸದಲ್ಲಿ ಜರುಗಿ ಹೋದ 12ನೇ ಶತಮಾನ ಕೇವಲ ಅಂಕಿ-ಸಂಖ್ಯೆಗಳ, ಸಮಯದ ದಾಖಲೆಯಲ್ಲ. ಎಲ್ಲ ರೀತಿಯ ಮಾದರಿ, ಆದರ್ಶಗಳ ಕಾಲ. ಶರಣರ ಬದುಕಿನ ನೈತಿಕ ತಳಹದಿಯೇ ವಚನಗಳು. ಪಂಚೇಂದ್ರಿಯಗಳ ನಿಗ್ರಹವೇ ಎಲ್ಲ ಬಗೆಯ ತಾರತಮ್ಯಗಳನ್ನು ನಿವಾರಿಸುವ ತಂತ್ರಗಳು. ನಮ್ಮ ಸಂವಿಧಾನ ಜಾರಿಗೆ ಬಂದುದು 1950ರಲ್ಲಿ. ಆದರೆ, ಈ ಆಶಯಗಳಂತೆ 12ನೇ
ಶತಮಾನದಲ್ಲಿಯೇ ಬಸವಣ್ಣ ಮೊದಲಾದ ಶರಣರು ಹೇಳಿದ್ದರಲ್ಲದೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಜಗತ್ತಿನ ಎಲ್ಲ ದೇಶಗಳ ಸಂವಿಧಾನಕ್ಕೆ ಬೇಕಾದ ತಾತ್ವಿಕ ನೆಲೆಗಟ್ಟು ವಚನಗಳಲ್ಲಿವೆ’ ಎಂದು ವಿವರಿಸಿದರು.