‘ಪ್ರತಿ ತೂಬುಗಳ ಬಳಿ ನೀರಾವರಿ ಸೌಡಿಗಳನ್ನು ಕಾವಲಿಗೆ ಹಾಕಿದ್ದು, ಕಾಲುವೆಯ ಗೇಟುಗಳನ್ನು ಬಲವಂತದಿಂದ ಕೀಳುವುದಾಗಲಿ, ಸಿಬ್ಬಂದಿಗೆ ತೊಂದರೆ ಕೊಡುವುದಾಗಲಿ, ಮಧ್ಯದಲ್ಲಿ ಯಾರಾದರೂ ನಾಲೆಗೆ ಅಡ್ಡ ಹಾಕಿ ನೀರು ಬಿಟ್ಟುಕೊಳ್ಳುವದನ್ನು ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ರೈತರು ತಮ್ಮ ಸರದಿ ಬಂದಾಗ ಹಗಲು–ರಾತ್ರಿ ಪಾಳಿಯಲ್ಲಿ ನೀರನ್ನು ಹಾಯಿಸಿಕೊಳ್ಳಬೇಕು’ ಎಂದು ತಿಳಿಸಲಾಗಿದೆ.