ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಗೆ ಬುಧವಾರ ನಸುಕಿನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದು ವಿಜಯಪುರದ ಒಂದೇ ಕುಟುಂಬದ ಐವರು ದಹನವಾಗಿದ್ದಾರೆ.
ಅಲ್ಲಿನ ಗಣೇಶ ನಗರದ ನಿವಾಸಿ ಶೀಲಾ ರವಿ (33), ಪುತ್ರಿ ಸ್ಪರ್ಶ (8), ಪುತ್ರ ಸಮೃದ್ಧ (5), ಸಹೋದರಿ ಕವಿತಾ ವಿನಾಯಕ (29), ಇವರ ಪುತ್ರಿ ನಿಶ್ಚಿತಾ (3) ಮೃತಪಟ್ಟವರು.
ಬೆಂಗಳೂರಿನ ರಾಜಾಜಿನಗರದ ಮನ್ಸೂರ್ ಪಟೇಲ್, ವಿಜಯಪುರ ಇಎಸ್ಐ ಆಸ್ಪತ್ರೆ ವೈದ್ಯ ಡಾ.ಪಾಂಡುರಂಗ ಚೌವಾಣ್, ಬಸವರಾಜ್ ಹಾಗೂ ಪ್ರಶಾಂತ್ ಗಾಯಗೊಂಡಿದ್ದು, ಹಿರಿಯೂರು ಮತ್ತು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.