ಭವ್ಯಾ ನರಸಿಂಹ ಮೂರ್ತಿ ಮಾತನಾಡಿ, ‘ಜೂನ್ 9ರಿಂದ ನನಗೆ ನಿರಂತರ ಕರೆಗಳು ಬರುತ್ತಿವೆ. ಕ್ರೈಂ ಬ್ರಾಂಚ್ಗೆ ದೂರು ಕೊಡಲು ಹೊರಟಿದ್ದೆ. ಆಗಲೂ ಕಾಲ್ ಬಂತು. ನೀವೇ ಮಾತನಾಡಿ ಎಂದು ಪೊಲೀಸರಿಗೆ ಫೋನ್ ಕೊಟ್ಟೆ. ಸಿಮ್ಗಳು ಬೇರೆ ರಾಜ್ಯಗಳಲ್ಲಿ ನೋಂದಣಿ ಆಗಿವೆ. ಆದರೆ, ಕನ್ನಡದಲ್ಲಿಯೇ ಮಾತನಾಡುತ್ತಾರೆ. ಹೀಗಾಗಿ, ಇಲ್ಲಿಯವರೇ ಮಾಡುತ್ತಿರುವ ಕೆಲಸವಿದು’ ಎಂದರು.