ಶಿವಮೊಗ್ಗ: ಕೊರೊನಾ ನಿರ್ಬಂಧಗಳ ಕಾರಣಕ್ಕೆ ಸಂಕಷ್ಟ ಅನುಭವಿಸುತ್ತಿರುವ ಭಿಕ್ಷುಕರು, ನಿರ್ಗತಿಕರು, ವಾಹನ ದೊರಕದೇ ನಿಲ್ದಾಣಗಳಲ್ಲೇ ಉಳಿದ ಜನರಿಗೆ ಶನಿವಾರ ಜಿಲ್ಲಾ ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಬಿಗ್ರೇಡ್ನಿಂದ ಸಿದ್ಧ ಆಹರ ಪೊಟ್ಟಣ, ನೀರಿನ ಬಾಟಲ್ ವಿತರಿಸಿದರು.
ಪ್ರತಿ ದಿನವೂ ನಿರಂತರವಾಗಿ ಈ ಕಾರ್ಯ ನಡೆಸಲಾಗುವುದು.ನಗರದ ಎಲ್ಲೇ ಆದರೂ ಇಂತಹ ಜನರು ಕಂಡು ಬಂದರೆ ನಾಗರಿಕರು, ಪೊಲೀಸರು, ಅಧಿಕಾರಿಗಳು ಮಾಹಿತಿ ನೀಡಬೇಕು. ಕಾರ್ಯಕರ್ತರುಸ್ಥಳಕ್ಕೆ ಹೋಗಿ ನೆರವು ನೀಡುವರು ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಹೇಳಿದರು.
ಕಿರಣ್, ಕವಿತಾ, ಸಂತೋಷ್, ಅರ್ಜುನ್, ರಾಘವೇಂದ್ರ, ಪ್ರವೀಣ್ ಕುಮಾರ್ ಮತ್ತಿತರರು ನಗರದ ಹಲವೆಡೆ ಆಹಾರ ಪಟ್ಟಣ ವಿತರಿಸಿದರು.