<p><strong>ಮಂಗಳೂರು: </strong>ಜಿಎಸ್ಟಿ ಮಂಡಳಿಯು ಸಭೆ ಸೇರಿ ಮಾಡುವ ಮಾರ್ಪಾಟುಗಳನ್ನು ಮತ್ತು ಆ ಕುರಿತು ಸರ್ಕಾರ ಹೊರಡಿಸುವ ಅಧಿಸೂಚನೆಗಳನ್ನು ವ್ಯಾಪಾರಿಗಳು ಅರ್ಥ ಮಾಡಿಕೊಳ್ಳಲು ಸಲಹೆ, ಮಾರ್ಗದರ್ಶನದ ಅಗತ್ಯವಿದೆ ಎಂದು ಲೆಕ್ಕಪರಿಶೋಧಕ ನಂದಗೋಪಾಲ್ ಶೆಣೈ ಹೇಳಿದರು.</p>.<p>ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಭಾಂಗಣದಲ್ಲಿ ನಡೆದ ‘ಜಿಎಸ್ಟಿ – ಇತ್ತೀಚೆಗಿನ ವಿದ್ಯಮಾನಗಳು’ ಎಂಬ ವಿಷಯ ವಾಗಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು. ಜಿಎಸ್ಟಿ ಮಂಡಳಿ ಆಗಾಗ ಸಭೆ ಸೇರಿ ಹಲವಾರು ಬದಲಾವಣೆ, ಮಾರ್ಪಾಡುಗಳನ್ನು ಮಾಡುತ್ತಿದೆ. ದೇಶದ ತೆರಿಗೆ ಪದ್ಧತಿ ಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ರೀತಿಯ ಚರ್ಚೆ, ಸಂವಾದ ಮತ್ತು ವ್ಯವಸ್ಥೆಯ ಸುಧಾರಣೆ ಅತ್ಯಗತ್ಯ. ಆದರೆ ಸರ್ಕಾರವು ಈ ಕುರಿತು ಅಧಿಸೂ ಚನೆ ಹೊರಡಿಸಿದಾಗ ಅದನ್ನು ಮೂಲ ಜಿಎಸ್ಟಿ ಕಾಯಿದೆಯೊಡನೆ ಓದಿಕೊಳ್ಳಬೇಕಾಗುತ್ತದೆ. ಕೇವಲ ಅಧಿಸೂಚನೆಗಳನ್ನು ಓದಿಕೊಂಡರೆ ಸಾಲದು ಎಂದು ಅವರು ಸಲಹೆ ಮಾಡಿದರು.</p>.<p>ಇತ್ತೀಚೆಗೆ ಸಾಮಾಜಿಕ ಜಾಲತಾ ಣಗಳಲ್ಲಿ ಜಿಎಸ್ಟಿ ಕುರಿತು ಮಾಹಿತಿ ರೂಪದಲ್ಲಿ ಹಲವಾರು ಸಂದೇ ಶಗಳು ಹರಿದಾಡುತ್ತವೆ. ಆದರೆ ಅವುಗಳ ಮೂಲ, ಆಧಾರದ ಉಲ್ಲೇಖ ಇರುವುದಿಲ್ಲ. ಇದರಿಂದ ಜನರು ಮತ್ತಷ್ಟು ದಾರಿ ತಪ್ಪುವ ಸಂಭವ ಇರುತ್ತದೆ. ಅಲ್ಲದೆ ಈ ಕಾಯಿ ದೆಯು ಸಾಫ್ಟ್ವೇರ್ ಆಧಾರಿತ ವಾಗಿರುವುದರಿಂದ, ಯಾವುದೇ ತಪ್ಪುದಾರಿಗಳಲ್ಲಿ ತೆರಿಗೆ ವಂಚನೆ ಮಾಡುವುದು ಸಾಧ್ಯವಿಲ್ಲ. ತೆರಿಗೆ ಪಾವತಿಸಿ, ತೆರಿಗೆ ವ್ಯವಸ್ಥೆಯು ನೀಡುವ ರಿಯಾಯಿತಿಗಳ ಲಾಭ ಪಡೆದು ಕೊಳ್ಳುವುದೇ ಜಾಣ ನಡೆ ಎಂದರು.</p>.<p>ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದ ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ‘ಹೊಸ ತೆರಿಗೆ ಪದ್ಧತಿಯಿಂದ ಅಭಿವೃದ್ಧಿಗೆ ಪೂರಕವಾಗಿರಬಹುದು. ಆದರೆ ಜನರಿಗೆ ಇನ್ನಷ್ಟು ಮಾಹಿತಿಯ ಅಗತ್ಯವಿದೆ ಎಂಬ ಕಾರಣಕ್ಕೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ’ ಎಂದು ಹೇಳಿದರು.</p>.<p>ವೇದಿಕೆಯಲ್ಲಿ ಲೆಕ್ಕಪರಿಶೋಧ ಕರಾದ ಕೇಶವ ಬಳ್ಳುಕುರಾಯ, ಕೊಲಿನ್ ರಾಡ್ರಿಗಸ್, ಲಕ್ಷ್ಮೀ ಜಿ.ಕೆ., ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಧರ್ ಪೈ ಮಾರೂರು, ಉಪಾಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಜಿಎಸ್ಟಿ ಮಂಡಳಿಯು ಸಭೆ ಸೇರಿ ಮಾಡುವ ಮಾರ್ಪಾಟುಗಳನ್ನು ಮತ್ತು ಆ ಕುರಿತು ಸರ್ಕಾರ ಹೊರಡಿಸುವ ಅಧಿಸೂಚನೆಗಳನ್ನು ವ್ಯಾಪಾರಿಗಳು ಅರ್ಥ ಮಾಡಿಕೊಳ್ಳಲು ಸಲಹೆ, ಮಾರ್ಗದರ್ಶನದ ಅಗತ್ಯವಿದೆ ಎಂದು ಲೆಕ್ಕಪರಿಶೋಧಕ ನಂದಗೋಪಾಲ್ ಶೆಣೈ ಹೇಳಿದರು.</p>.<p>ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಭಾಂಗಣದಲ್ಲಿ ನಡೆದ ‘ಜಿಎಸ್ಟಿ – ಇತ್ತೀಚೆಗಿನ ವಿದ್ಯಮಾನಗಳು’ ಎಂಬ ವಿಷಯ ವಾಗಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು. ಜಿಎಸ್ಟಿ ಮಂಡಳಿ ಆಗಾಗ ಸಭೆ ಸೇರಿ ಹಲವಾರು ಬದಲಾವಣೆ, ಮಾರ್ಪಾಡುಗಳನ್ನು ಮಾಡುತ್ತಿದೆ. ದೇಶದ ತೆರಿಗೆ ಪದ್ಧತಿ ಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ರೀತಿಯ ಚರ್ಚೆ, ಸಂವಾದ ಮತ್ತು ವ್ಯವಸ್ಥೆಯ ಸುಧಾರಣೆ ಅತ್ಯಗತ್ಯ. ಆದರೆ ಸರ್ಕಾರವು ಈ ಕುರಿತು ಅಧಿಸೂ ಚನೆ ಹೊರಡಿಸಿದಾಗ ಅದನ್ನು ಮೂಲ ಜಿಎಸ್ಟಿ ಕಾಯಿದೆಯೊಡನೆ ಓದಿಕೊಳ್ಳಬೇಕಾಗುತ್ತದೆ. ಕೇವಲ ಅಧಿಸೂಚನೆಗಳನ್ನು ಓದಿಕೊಂಡರೆ ಸಾಲದು ಎಂದು ಅವರು ಸಲಹೆ ಮಾಡಿದರು.</p>.<p>ಇತ್ತೀಚೆಗೆ ಸಾಮಾಜಿಕ ಜಾಲತಾ ಣಗಳಲ್ಲಿ ಜಿಎಸ್ಟಿ ಕುರಿತು ಮಾಹಿತಿ ರೂಪದಲ್ಲಿ ಹಲವಾರು ಸಂದೇ ಶಗಳು ಹರಿದಾಡುತ್ತವೆ. ಆದರೆ ಅವುಗಳ ಮೂಲ, ಆಧಾರದ ಉಲ್ಲೇಖ ಇರುವುದಿಲ್ಲ. ಇದರಿಂದ ಜನರು ಮತ್ತಷ್ಟು ದಾರಿ ತಪ್ಪುವ ಸಂಭವ ಇರುತ್ತದೆ. ಅಲ್ಲದೆ ಈ ಕಾಯಿ ದೆಯು ಸಾಫ್ಟ್ವೇರ್ ಆಧಾರಿತ ವಾಗಿರುವುದರಿಂದ, ಯಾವುದೇ ತಪ್ಪುದಾರಿಗಳಲ್ಲಿ ತೆರಿಗೆ ವಂಚನೆ ಮಾಡುವುದು ಸಾಧ್ಯವಿಲ್ಲ. ತೆರಿಗೆ ಪಾವತಿಸಿ, ತೆರಿಗೆ ವ್ಯವಸ್ಥೆಯು ನೀಡುವ ರಿಯಾಯಿತಿಗಳ ಲಾಭ ಪಡೆದು ಕೊಳ್ಳುವುದೇ ಜಾಣ ನಡೆ ಎಂದರು.</p>.<p>ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದ ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ‘ಹೊಸ ತೆರಿಗೆ ಪದ್ಧತಿಯಿಂದ ಅಭಿವೃದ್ಧಿಗೆ ಪೂರಕವಾಗಿರಬಹುದು. ಆದರೆ ಜನರಿಗೆ ಇನ್ನಷ್ಟು ಮಾಹಿತಿಯ ಅಗತ್ಯವಿದೆ ಎಂಬ ಕಾರಣಕ್ಕೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ’ ಎಂದು ಹೇಳಿದರು.</p>.<p>ವೇದಿಕೆಯಲ್ಲಿ ಲೆಕ್ಕಪರಿಶೋಧ ಕರಾದ ಕೇಶವ ಬಳ್ಳುಕುರಾಯ, ಕೊಲಿನ್ ರಾಡ್ರಿಗಸ್, ಲಕ್ಷ್ಮೀ ಜಿ.ಕೆ., ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಧರ್ ಪೈ ಮಾರೂರು, ಉಪಾಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>