ಕೀರ್ತನ್ ಗುಂಪಿನ ಯುವಕರು ಮತ್ತು ಎದುರಾಳಿಯ ಮತ್ತೊಂದು ಗುಂಪಿನ ಯುವಕರ ನಡುವೆ ಕೆಲವು ದಿನಗಳಿಂದ ವೈಷಮ್ಯ ಇತ್ತು. ಭಾನುವಾರ ರಾತ್ರಿ ಕೀರ್ತನ್, ನಿತಿನ್ ಮತ್ತು ಮಹೇಶ್ ಅರಸುಗುಡ್ಡೆಯಲ್ಲಿ ಒಟ್ಟಾಗಿದ್ದರು. ಅಲ್ಲಿಂದ ಎದುರಾಳಿಗಳಿಗೆ ದೂರವಾಣಿ ಕರೆಮಾಡಿದ್ದ ಕೀರ್ತನ್, ಅಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.