ಮಂಗಳೂರು: ಆಫ್ರಿಕನ್ ಬಸವನ ಹುಳು ಕಾಟ ಹೆಚ್ಚಾಗಿದ್ದು, ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ 100 ಎಕರೆ ಪ್ರದೇಶದಲ್ಲಿ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಕಾಸರಗೋಡು ಸೇರಿದಂತೆ ಆಲಂಕಾರು, ಸವಣೂರು, ಕೊಯಿಲ ಗ್ರಾಮಗಳ ಕೃಷಿಕರಿಗೆ ತೊಂದರೆ ಉಂಟು ಮಾಡಿದ್ದ ಆಫ್ರಿಕನ್ ಬಸವನ ಹುಳು, ಉರುವಾಲು ಗ್ರಾಮದಲ್ಲಿ ವ್ಯಾಪಕವಾಗಿವೆ.