<p><strong>ಪುತ್ತೂರು</strong>: ‘ಜ್ಯೋತಿಷಿ ಎಂದು ಹೇಳಿಕೊಳ್ಳುತ್ತಿರುವ ದೈವ ನರ್ತಕರೊಬ್ಬರು ವಾಮಾಚಾರ ಮತ್ತು ಪ್ರೇತ ಬಾಧೆ ಇದೆ ಎಂದು ನಂಬಿಸಿ ಪರಿಹಾರದ ಹೆಸರಿನಲ್ಲಿ ನೆಕ್ಕರೆಕಾಡಿನ ಕಮಲ ಎಂಬುವರಿಂದ ಹಣ ಪಡೆದಿದ್ದಾರೆ. ಸಾಲವಾಗಿ ಪಡೆದ ₹ 2 ಲಕ್ಷವನ್ನೂ ಹಿಂತಿರುಗಿಸದೆ ವಂಚಿಸುತ್ತಿದ್ದಾರೆ. ಸುಳ್ಳು ದೂರಿನ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕ್ಕಾಡು ತಿಳಿಸಿದರು.</p>.<p>ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ಸಮಸ್ಯೆ ಇದ್ದುದರಿಂದ ಕಮಲ ಮತ್ತು ಅವರ ಪತಿ ಬಾಲಕೃಷ್ಣ ಅವರು ಜ್ಯೋತಿಷಿ ಮನೆಗೆ ಹೋಗಿದ್ದರು. ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ₹ 45 ಸಾವಿರ ಪಡೆದಿದ್ದಾರೆ. ಆ ಬಳಿಕ ಮನೆ ನಿರ್ಮಾಣದ ಹೆಸರಿನಲ್ಲಿ ₹ 2 ಲಕ್ಷ ಸಾಲ ಪಡೆದು, ಎರಡು ವರ್ಷಗಳಾದರೂ ಹಿಂತಿರುಗಿಸಿಲ್ಲ’ ಎಂದು ಆರೋಪಿಸಿದರು.</p>.<p>ಪ್ರಮುಖರಾದ ಯಾಮಿನಿ ಬೆಟ್ಟಂಪಾಡಿ, ವಿಮಲ ಮುಳಿಯ, ಕಮಲ, ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ‘ಜ್ಯೋತಿಷಿ ಎಂದು ಹೇಳಿಕೊಳ್ಳುತ್ತಿರುವ ದೈವ ನರ್ತಕರೊಬ್ಬರು ವಾಮಾಚಾರ ಮತ್ತು ಪ್ರೇತ ಬಾಧೆ ಇದೆ ಎಂದು ನಂಬಿಸಿ ಪರಿಹಾರದ ಹೆಸರಿನಲ್ಲಿ ನೆಕ್ಕರೆಕಾಡಿನ ಕಮಲ ಎಂಬುವರಿಂದ ಹಣ ಪಡೆದಿದ್ದಾರೆ. ಸಾಲವಾಗಿ ಪಡೆದ ₹ 2 ಲಕ್ಷವನ್ನೂ ಹಿಂತಿರುಗಿಸದೆ ವಂಚಿಸುತ್ತಿದ್ದಾರೆ. ಸುಳ್ಳು ದೂರಿನ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕ್ಕಾಡು ತಿಳಿಸಿದರು.</p>.<p>ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ಸಮಸ್ಯೆ ಇದ್ದುದರಿಂದ ಕಮಲ ಮತ್ತು ಅವರ ಪತಿ ಬಾಲಕೃಷ್ಣ ಅವರು ಜ್ಯೋತಿಷಿ ಮನೆಗೆ ಹೋಗಿದ್ದರು. ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ₹ 45 ಸಾವಿರ ಪಡೆದಿದ್ದಾರೆ. ಆ ಬಳಿಕ ಮನೆ ನಿರ್ಮಾಣದ ಹೆಸರಿನಲ್ಲಿ ₹ 2 ಲಕ್ಷ ಸಾಲ ಪಡೆದು, ಎರಡು ವರ್ಷಗಳಾದರೂ ಹಿಂತಿರುಗಿಸಿಲ್ಲ’ ಎಂದು ಆರೋಪಿಸಿದರು.</p>.<p>ಪ್ರಮುಖರಾದ ಯಾಮಿನಿ ಬೆಟ್ಟಂಪಾಡಿ, ವಿಮಲ ಮುಳಿಯ, ಕಮಲ, ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>