ಸ್ವಾತಂತ್ರ್ಯ ಹೋರಾಟಗಾರರಾಗಿ, ಭೂಸುಧಾರಣೆಯ ಹರಿಕಾರರಾಗಿ ಬದುಕು ಸಾಗಿಸಿದವರು ಅಮ್ಮೆಂಬಳ ಬಾಳಪ್ಪರು.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ದೇಶದ ಉದ್ದಗಲಕ್ಕೂ ಸಂಚರಿಸಿ, ಹೋರಾಟ ಮಾಡಿದ್ದರು. ತಮ್ಮ ವೈಯುಕ್ತಿಕ ಬದುಕನ್ನು ಬದಿಗಿರಿಸಿ ದೇಶ ಸೇವೆಗಾಗಿ ಬದುಕು ಮುಡಿಪಾಗಿರಿಸಿದ್ದರು. ಸ್ವಾತಂತ್ರ ಹೋರಾಟಗಾರನಿಗೆ ಹುಟ್ಟೂರಿನ ಗೌರವ ಎನ್ನುವಂತೆ ಇಲ್ಲಿ ವೃತ್ತ ನಿರ್ಮಿಸಿ, ಅವರ ಹೆಸರಿಡುವಂತೆ ಮುಡಿಪು ಕುಲಾಲ ಸಂಘದ ವತಿಯಿಂದ ಶಾಸಕ ಯು.ಟಿ.ಖಾದರ್ ಅವರಿಗೆ ಮನವಿ ಮಾಡಲಾಗಿತ್ತು.