ಮೂಲ್ಕಿ: ಆಯೋಗ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಸ್ವೀಪ್ ಸಮಿತಿ, ಮೂಲ್ಕಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ವತಿಯಿಂದ ಸಸಿಹಿತ್ಲು ಮುಂಡ ಬೀಚ್ನಲ್ಲಿ ಮತದಾನ ಜಾಗೃತಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ ಕೆ.ಅವರು ಕಾರ್ಯಕ್ರಮ ಉದ್ಘಾಟಿಸಿ, ಎಲ್ಲರೂ ಮತ ಚಲಾಯಿಸಬೇಕು ಎಂದು ಹೇಳಿದರು.
ಮೂಲ್ಕಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ ಎಂ.ಎನ್.ಮಾತನಾಡಿದರು.
ಬಳಿಕ ಪ್ರಕಾಶ್ ಆಚಾರ್ಯ, ಶ್ವೇತಾ ಆಚಾರ್ಯ ಅವರಿಂದ ಸಂಗೀತ ರಸಸಂಜೆ, ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ನೃತ್ಯ, ಮೆಹೆಂದಿ ಕಾರ್ಯಕ್ರಮ, ಸೆಲ್ಫಿ ಪಾಯಿಂಟ್, ಸಹಿ ಅಭಿಯಾನ, ಮರಳು ಕಲಾಕೃತಿ, ವಿದ್ಯುತ್ ದ್ವೀಪದಿಂದ ಸ್ವೀಪ್ ಅಕ್ಷರ, ಗಾಳಿಪಟ ಉತ್ಸವ, ಪಂಜಿನ ಮೆರವಣಿಗೆ ನಡೆಯಿತು.
ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವೆಂಕಟಾಚಲಪತಿ ಭಾಗವಹಿಸಿದ್ದರು.