ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳವು ಕರ್ನಿರೆಯಲ್ಲಿ ‘ಅಯೋಧ್ಯಾ ದೀಪ’ ಪ್ರಸಂಗವನ್ನು, ಮೆಕ್ಕೆಕಟ್ಟು ಮೇಳವು ಬಿದ್ಕಲ್ಕಟ್ಟೆಯಲ್ಲಿ ‘ರಾಮಾಶ್ವಮೇಧ’ ಪ್ರಸಂಗವನ್ನು, ಸೂಡಾ ಮೇಳವು ಕೊಟ್ಟಾರಚೌಕಿಯಲ್ಲಿ ‘ಶ್ರೀರಾಮಚರಿತಾಮೃತಂ’ ಪ್ರಸಂಗವನ್ನು, ಕಳವಾರು ಬೆಂಕಿನಾಥೇಶ್ವರ ಮೇಳವು ಕಡಂಬು ಕಟ್ಟಿಯಲ್ಲಿ ‘ಶ್ರೀರಾಮ ದರ್ಶನ’ ಪ್ರಸಂಗವನ್ನು, ಬಜಪೆ ಸುಂಕದಕಟ್ಟೆ ಮೇಳವು ಫಜೀರುವಿನಲ್ಲಿ ‘ಅಯೋಧ್ಯೆ ಶ್ರೀರಾಮ’ ಪ್ರಸಂಗವನ್ನು, ಶ್ರೀಕ್ಷೇತ್ರ ಹಿರಿಯಡಕ ಮೇಳವು ಹಿರಿಯಡಕದಲ್ಲಿ ‘ಶ್ರೀರಾಮಚರಿತಂ’ ಪ್ರಸಂಗವನ್ನು, ಹಟ್ಟಿಯಂಗಡಿ ಮೇಳವು ಫಿಲ್ಕಳದಲ್ಲಿ ‘ರಾಮಾಶ್ವಮೇಧ’, ಗೆಜ್ಜೆಗಿರಿ ಮೇಳವು ಬೆಳ್ತಂಗಡಿಯಲ್ಲಿ ‘ಅಯೋಧ್ಯಾಧಿಪ ಪಟ್ಟಾಭಿರಾಮ’ ಪ್ರಸಂಗವನ್ನು, ಹನುಮಗಿರಿ ಮೇಳವು ವಿಟ್ಲದಲ್ಲಿ ‘ನಮೋ ರಘುವಂಶದೀಪ’ ಪ್ರಸಂಗವನ್ನು, ಮಡಾಮಕ್ಕಿ ಮೇಳವು ಬಂಟಕಲ್ಲಿನಲ್ಲಿ ‘ಶ್ರೀರಾಮದರ್ಶನ’ ಪ್ರಸಂಗದ ಪ್ರದರ್ಶನವನ್ನು ಏರ್ಪಡಿಸಿತ್ತು.