‘ಸುರೇಶ ನಾಯ್ಕ ಅವರು ರಸ್ತೆ ದಾಟಲೆಂದು ರಸ್ತೆ ಬದಿಯಲ್ಲಿ ನಿಂತು ಕೊಂಡಿದ್ದರು. ಆಗ ಬೆಳ್ತಂಗಡಿ ಕಡೆಯಿಂದ ಮದ್ದಡ್ಕ ಕಡೆಗೆ ಹೋಗುತ್ತಿದ್ದ ಶಾಲಾ ಬಸ್ ಅವರಿಗೆ ಡಿಕ್ಕಿ ಹೊಡೆದಿತ್ತು. ಬಸ್ಸಿನ ಹಿಂಬದಿ ಚಕ್ರ ಅವರ ಕಾಲಿನ ಮೇಲೆ ಹರಿದು ಹೋಗಿತ್ತು. ಅವರ ಎಡ ಕಾಲಿನ ಪಾದಕ್ಕೆ, ಎಡ ಕೆನ್ನೆಗೆ, ಸೊಂಟಕ್ಕೆ ತೀವ್ರ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತ ಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.