<p><strong>ಮಂಗಳೂರು: </strong>ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರುವ ಶಾಸಕ ವೇದವ್ಯಾಸ ಕಾಮತ್, ತಮ್ಮ ಆಡಳಿತಾತ್ಮಕ ಅಸಮರ್ಥತೆ, ವೈಫಲ್ಯವನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ತಿಳಿಸಿದರು.</p>.<p>ಲಸಿಕೆಯನ್ನು ಬಿಜೆಪಿ ಉಚಿತವಾಗಿ ಕೊಡುತ್ತಿದೆ ಎನ್ನುವ ತಪ್ಪು ಸಂದೇಶವನ್ನು ನೀಡಲು ವೇದವ್ಯಾಸ ಕಾಮತ್ ಶ್ರಮಿಸುತ್ತಿದ್ದಾರೆ. ಸರ್ಕಾರ ಜನರ ತೆರಿಗೆಯ ಹಣದಿಂದ ಲಸಿಕೆ ನೀಡಿದೆಯೇ ಹೊರತು, ಬಿಜೆಪಿ ಆದಾಯದಿಂದಲ್ಲ ಎಂದರು.</p>.<p>ಕೋವಿಡ್ ಬಾಧಿತರ ಕುಟುಂಬದ ಸದಸ್ಯರು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹೊರಗಡೆ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಪಡೆಯುವ ಕೋಣೆ ಹಾಗೂ ಹೋಟೆಲ್-ಕ್ಯಾಂಟೀನ್ ಇಲ್ಲದೆ ಕಷ್ಟಪಡುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ ಕ್ರಮ ಕೈಗೊಳ್ಳಬೇಖು. ಶಾಸಕ ಕಾಮತ್ ಇದನ್ನು ಗಮನಿಸಬೇಕು ಎಂದು ಆಗ್ರಹಿಸಿದರು.</p>.<p>ಜಿಲ್ಲಾಡಳಿತ ಮೃತರಾದವರ ವಿವರವನ್ನು ಮರೆಮಾಚಿ, ಸಂಖ್ಯೆ ಕಡಿಮೆ ಇದೆ ಎಂದು ತೋರಿಸುತ್ತಿದೆ. ಹೃದ್ರೋಗ, ಕಿಡ್ನಿ, ಸಕ್ಕರೆ ಕಾಯಿಲೆ ಇರುವವರು ಕೋವಿಡ್ ಬಾಧಿಸಿ ಮೃತಪಟ್ಟರೆ, ಅವರನ್ನು ಈ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ. ಮೃತರ ಸಂಖ್ಯೆ ಹೆಚ್ಚುತ್ತಿದ್ದು, ತಹಶೀಲ್ದಾರರು ಅದನ್ನು ದೃಢೀಕರಿಸಬೇಕಾಗಿದೆ. ಇದರಿಂದ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರ ವಿಳಂಬವಾಗುತ್ತಿದೆ ಎಂದು ಹೇಳಿದರು.</p>.<p>ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕಾಗಿರುತ್ತದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ಜಿಲ್ಲಾಡಳಿತ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>.<p class="Briefhead"><strong>ಮನೆಗಳಿಗೆ ತೆರಳಿ ಲಸಿಕೆ ನೀಡಿ: ಐವನ್</strong></p>.<p>ಆರೋಗ್ಯ ಇಲಾಖೆ ಕೂಡಲೇ ಮನೆಮನೆಗೆ ಭೇಟಿ ಮಾಡಿ ಸೋಂಕಿತರ ಪರೀಕ್ಷೆ ಮಾಡಿದ್ದಲ್ಲಿ, ಕೋವಿಡ್ ಎದುರಿಸಲು ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ಹೆಲ್ಪ್ಲೈನ್ ಸಂಚಾಲಕ ಐವನ್ ಡಿಸೋಜ ಹೇಳಿದರು.</p>.<p>‘ಲಸಿಕೆ ಹಂಚಿಕೆ ಕೇವಲ ಉಳ್ಳವರಿಗೆ ಮಾತ್ರ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ಲಸಿಕೆಯನ್ನು ತರಿಸಿ ನೀಡುವಲ್ಲಿ ವಿಫಲಗೊಂಡಿದೆ. ಕೂಡಲೇ ಮನೆ ಮನೆಗೆ ತೆರಳಿ, ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<p>ಕಳೆದ 23 ದಿನಗಳಿಂದ ಲಾಕ್ಡೌನ್ ಘೋಷಣೆಯಾಗಿದ್ದು, ಕಾರ್ಮಿಕರಿಗೆ, ಆರ್ಥಿಕ ಅತಂತ್ರ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 4 ಸಾವಿರ ಉಚಿತ ವೈದ್ಯ ಚಿಕಿತ್ಸೆ, ಉಚಿತ ಪಡಿತರ ನೀಡಬೇಕು. ನೀರು, ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರುವ ಶಾಸಕ ವೇದವ್ಯಾಸ ಕಾಮತ್, ತಮ್ಮ ಆಡಳಿತಾತ್ಮಕ ಅಸಮರ್ಥತೆ, ವೈಫಲ್ಯವನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ತಿಳಿಸಿದರು.</p>.<p>ಲಸಿಕೆಯನ್ನು ಬಿಜೆಪಿ ಉಚಿತವಾಗಿ ಕೊಡುತ್ತಿದೆ ಎನ್ನುವ ತಪ್ಪು ಸಂದೇಶವನ್ನು ನೀಡಲು ವೇದವ್ಯಾಸ ಕಾಮತ್ ಶ್ರಮಿಸುತ್ತಿದ್ದಾರೆ. ಸರ್ಕಾರ ಜನರ ತೆರಿಗೆಯ ಹಣದಿಂದ ಲಸಿಕೆ ನೀಡಿದೆಯೇ ಹೊರತು, ಬಿಜೆಪಿ ಆದಾಯದಿಂದಲ್ಲ ಎಂದರು.</p>.<p>ಕೋವಿಡ್ ಬಾಧಿತರ ಕುಟುಂಬದ ಸದಸ್ಯರು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹೊರಗಡೆ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಪಡೆಯುವ ಕೋಣೆ ಹಾಗೂ ಹೋಟೆಲ್-ಕ್ಯಾಂಟೀನ್ ಇಲ್ಲದೆ ಕಷ್ಟಪಡುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ ಕ್ರಮ ಕೈಗೊಳ್ಳಬೇಖು. ಶಾಸಕ ಕಾಮತ್ ಇದನ್ನು ಗಮನಿಸಬೇಕು ಎಂದು ಆಗ್ರಹಿಸಿದರು.</p>.<p>ಜಿಲ್ಲಾಡಳಿತ ಮೃತರಾದವರ ವಿವರವನ್ನು ಮರೆಮಾಚಿ, ಸಂಖ್ಯೆ ಕಡಿಮೆ ಇದೆ ಎಂದು ತೋರಿಸುತ್ತಿದೆ. ಹೃದ್ರೋಗ, ಕಿಡ್ನಿ, ಸಕ್ಕರೆ ಕಾಯಿಲೆ ಇರುವವರು ಕೋವಿಡ್ ಬಾಧಿಸಿ ಮೃತಪಟ್ಟರೆ, ಅವರನ್ನು ಈ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ. ಮೃತರ ಸಂಖ್ಯೆ ಹೆಚ್ಚುತ್ತಿದ್ದು, ತಹಶೀಲ್ದಾರರು ಅದನ್ನು ದೃಢೀಕರಿಸಬೇಕಾಗಿದೆ. ಇದರಿಂದ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರ ವಿಳಂಬವಾಗುತ್ತಿದೆ ಎಂದು ಹೇಳಿದರು.</p>.<p>ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕಾಗಿರುತ್ತದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ಜಿಲ್ಲಾಡಳಿತ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>.<p class="Briefhead"><strong>ಮನೆಗಳಿಗೆ ತೆರಳಿ ಲಸಿಕೆ ನೀಡಿ: ಐವನ್</strong></p>.<p>ಆರೋಗ್ಯ ಇಲಾಖೆ ಕೂಡಲೇ ಮನೆಮನೆಗೆ ಭೇಟಿ ಮಾಡಿ ಸೋಂಕಿತರ ಪರೀಕ್ಷೆ ಮಾಡಿದ್ದಲ್ಲಿ, ಕೋವಿಡ್ ಎದುರಿಸಲು ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ಹೆಲ್ಪ್ಲೈನ್ ಸಂಚಾಲಕ ಐವನ್ ಡಿಸೋಜ ಹೇಳಿದರು.</p>.<p>‘ಲಸಿಕೆ ಹಂಚಿಕೆ ಕೇವಲ ಉಳ್ಳವರಿಗೆ ಮಾತ್ರ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ಲಸಿಕೆಯನ್ನು ತರಿಸಿ ನೀಡುವಲ್ಲಿ ವಿಫಲಗೊಂಡಿದೆ. ಕೂಡಲೇ ಮನೆ ಮನೆಗೆ ತೆರಳಿ, ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</p>.<p>ಕಳೆದ 23 ದಿನಗಳಿಂದ ಲಾಕ್ಡೌನ್ ಘೋಷಣೆಯಾಗಿದ್ದು, ಕಾರ್ಮಿಕರಿಗೆ, ಆರ್ಥಿಕ ಅತಂತ್ರ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 4 ಸಾವಿರ ಉಚಿತ ವೈದ್ಯ ಚಿಕಿತ್ಸೆ, ಉಚಿತ ಪಡಿತರ ನೀಡಬೇಕು. ನೀರು, ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>