ವಿನಯ ಹೆಗ್ಡೆ ಮಾತನಾಡಿ, ‘ಆರಂಭದ ದಿನಗಳಲ್ಲಿ ನನ್ನನ್ನು ನೋಡಿ, ಈತ ಏನು ಮಾಡಬಲ್ಲ ಎಂದು ಭಾವಿಸಿದವರಿದ್ದಾರೆ. ನನ್ನ ಸಾಧನೆಗಳ ಹಿಂದೆ ಒಂದು ತಂಡದ ಸಹಕಾರವಿದೆ. ಇದುವರೆಗಿನ ಎಲ್ಲಾ ಸಾಧನೆಗಳು ಕೇವಲ ನನ್ನದಷ್ಟೇ ಅಲ್ಲ. ನಾನು ಅದರ ಒಂದು ಭಾಗ ಆಗಿರಬಹುದು. ಆದರೆ ನನ್ನ ಜತೆಗೆ ಟಿ.ಆರ್. ಶೆಣೈ, ಗುರುಪ್ರಸಾದ್, ಶಾಂತಾರಾಂ ಶೆಟ್ಟಿ ಮುಂತಾದವರು ಇದ್ದುದರಿಂದಲೇ ಇದೆಲ್ಲಾ ಸಾದ್ಯವಾಗಿದೆ. ಹಲವು ರಾಜಕೀಯ ನಾಯಕರೂ ನನಗೆ ಸಹಕಾರ ನೀಡಿದ್ದಾರೆ. ದಿವಂಗತ ರಾಮಕೃಷ್ಣ ಹೆಗಡೆ ಅವರ ಸಹಕಾರ ಇರದಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯಲು ಸಾದ್ಯವಾಗುತ್ತಿರಲಿಲ್ಲ’ ಎಂದರು.