ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಡಗಿಸಿಟ್ಟಿದ್ದ ಕೇಬಲ್ ಅನ್ನು ಕೊಂಡೊಯ್ಯಲಾಗಿದೆ. ಬೇರೆ ಬೇರೆ ಕಡೆಗಳಿಂದ ಕದ್ದು ತಂದ ಕೇಬಲನ್ನು ಉಜಿರೆಯಲ್ಲಿರುವ ನಾಗಬನದ ಮುಂಭಾಗದ ಚರಂಡಿಯಲ್ಲಿ ದಾಸ್ತಾನು ಮಾಡಿದ್ದು, ಅದರ ಮೇಲೆ ಮಣ್ಣು ಮುಚ್ಚಿ ಹಾಕಲಾಗಿತ್ತು. ಅಲ್ಲಿಂದ ಭಾನುವಾರ ತಡರಾತ್ರಿ ಸುಮಾರು ಒಂದು ಕ್ವಿಂಟಲ್ನಷ್ಟು ಕೇಬಲ್ಅನ್ನು ಜೆಸಿಬಿ ಮೂಲಕ ಅಗೆದು ತೆಗೆದು ಕೊಂಡುಹೋದ ದೃಶ್ಯ ಸಮೀಪದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.