<p><strong>ಮಂಗಳೂರು:</strong> ನಗರದ ಬಿಜೈನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆಶ್ರಯದಲ್ಲಿ ವಿಶೇಷ ಕ್ರಿಸ್ಮಸ್ ಸೌಹಾರ್ದ ಕೂಟ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು. ಕ್ರಿಸ್ಮಸ್ ಟ್ರೀಯ ದೀಪ ಬೆಳಗಿಸುವ ಮೂಲಕ ಚರ್ಚ್ ಪ್ರಧಾನ ಧರ್ಮಗುರು ಡಾ.ಜೆ.ಬಿ.ಸಲ್ಡಾನ ಮತ್ತು ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಡಾ.ಜೆ.ಬಿ. ಸಲ್ಡಾನ ಮಾತನಾಡಿ, ‘ಯೇಸುಸ್ವಾಮಿ ಯಾವಾಗಲೂ ನಮ್ಮೊಂದಿಗೆ ಇದ್ದಾನೆ ಎಂಬುದು ನಮ್ಮ ನಂಬಿಕೆ, ಯೇಸು ಸ್ವಾಮಿಯೇ ನಮ್ಮೊಂದಿಗಿದ್ದು ಕಾಪಾಡುತ್ತಾನೆ ಎನ್ನುವ ವಿಶ್ವಾಸದಲ್ಲಿ ನಾವು ಧರ್ಮ ಮಾರ್ಗದಲ್ಲಿ ಧೈರ್ಯದಿಂದ ಮುಂದುವರೆಯಬಹುದು’ ಎಂದು ಸಂದೇಶ ನೀಡಿದರು.</p>.<p>ಲಯನ್ಸ್ ವತಿಯಿಂದ 4 ವಾಕರ್ಗಳನ್ನು ವಿತರಿಸಿದ ಲಯನ್ಸ್ ಜಿಲ್ಲಾ 317 ಡಿ ಗವರ್ನರ್ ಡಾ.ಗೀತ್ ಪ್ರಕಾಶ್, ‘ಪ್ರೀತಿ ಯಾವಾಗಲು ನಮ್ಮಲ್ಲಿರಲಿ. ಶಾಂತಿ ಎಲ್ಲೆಡೆ ನೆಲೆಸಲಿ’ ಎಂದು ಹಾರೈಸಿದರು.</p>.<p>ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಶಶಿಧರ್ ಹೆಗ್ಡೆ, ಲ್ಯಾನ್ಸಿ ಲೆಟ್ ಪಿಂಟೊ, ಜಯಂತ್ ಅಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಬರ್ಟ್ ಡಿಸೋಜ, ಚರ್ಚ್ ಸಹಾಯಕ ಧರ್ಮಗುರುಪ್ರಮೋದ್ ಕ್ರಾಸ್ತ, ವಿಶ್ವಾಸ್ ಜೋಯ್ ಮಿಸ್ಕಿತ್ ವೇದಿಕೆಯಲ್ಲಿದ್ದರು.</p>.<p>ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅಶೋಕ್ ಪಿಂಟೊ ಸ್ವಾಗತಿಸಿದರು. ರಾಬಿನ್ ಕುಟಿನೋ ನಿರೂಪಿಸಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರೀತಿ ಗೋಮ್ಸ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಗರದ ಬಿಜೈನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆಶ್ರಯದಲ್ಲಿ ವಿಶೇಷ ಕ್ರಿಸ್ಮಸ್ ಸೌಹಾರ್ದ ಕೂಟ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು. ಕ್ರಿಸ್ಮಸ್ ಟ್ರೀಯ ದೀಪ ಬೆಳಗಿಸುವ ಮೂಲಕ ಚರ್ಚ್ ಪ್ರಧಾನ ಧರ್ಮಗುರು ಡಾ.ಜೆ.ಬಿ.ಸಲ್ಡಾನ ಮತ್ತು ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.</p>.<p>ಡಾ.ಜೆ.ಬಿ. ಸಲ್ಡಾನ ಮಾತನಾಡಿ, ‘ಯೇಸುಸ್ವಾಮಿ ಯಾವಾಗಲೂ ನಮ್ಮೊಂದಿಗೆ ಇದ್ದಾನೆ ಎಂಬುದು ನಮ್ಮ ನಂಬಿಕೆ, ಯೇಸು ಸ್ವಾಮಿಯೇ ನಮ್ಮೊಂದಿಗಿದ್ದು ಕಾಪಾಡುತ್ತಾನೆ ಎನ್ನುವ ವಿಶ್ವಾಸದಲ್ಲಿ ನಾವು ಧರ್ಮ ಮಾರ್ಗದಲ್ಲಿ ಧೈರ್ಯದಿಂದ ಮುಂದುವರೆಯಬಹುದು’ ಎಂದು ಸಂದೇಶ ನೀಡಿದರು.</p>.<p>ಲಯನ್ಸ್ ವತಿಯಿಂದ 4 ವಾಕರ್ಗಳನ್ನು ವಿತರಿಸಿದ ಲಯನ್ಸ್ ಜಿಲ್ಲಾ 317 ಡಿ ಗವರ್ನರ್ ಡಾ.ಗೀತ್ ಪ್ರಕಾಶ್, ‘ಪ್ರೀತಿ ಯಾವಾಗಲು ನಮ್ಮಲ್ಲಿರಲಿ. ಶಾಂತಿ ಎಲ್ಲೆಡೆ ನೆಲೆಸಲಿ’ ಎಂದು ಹಾರೈಸಿದರು.</p>.<p>ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಶಶಿಧರ್ ಹೆಗ್ಡೆ, ಲ್ಯಾನ್ಸಿ ಲೆಟ್ ಪಿಂಟೊ, ಜಯಂತ್ ಅಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಬರ್ಟ್ ಡಿಸೋಜ, ಚರ್ಚ್ ಸಹಾಯಕ ಧರ್ಮಗುರುಪ್ರಮೋದ್ ಕ್ರಾಸ್ತ, ವಿಶ್ವಾಸ್ ಜೋಯ್ ಮಿಸ್ಕಿತ್ ವೇದಿಕೆಯಲ್ಲಿದ್ದರು.</p>.<p>ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಅಶೋಕ್ ಪಿಂಟೊ ಸ್ವಾಗತಿಸಿದರು. ರಾಬಿನ್ ಕುಟಿನೋ ನಿರೂಪಿಸಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರೀತಿ ಗೋಮ್ಸ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>