7 ಲಸಿಕೆ ಸೋರಿಕೆ: ವೈದ್ಯ ಕಾಂಗ್ರೆಸ್ ಆರೋಪ
ಮಂಗಳೂರು: ‘ನಾಲ್ಕು ತಿಂಗಳಲ್ಲಿ ಉತ್ಪಾದನೆ ಆಗಿರುವ 34 ಕೋಟಿ ಲಸಿಕೆಯಲ್ಲಿ ಅಂದಾಜು 7 ಕೋಟಿ ಲಸಿಕೆ ನಾಪತ್ತೆಯಾಗಿದ್ದು ಎಲ್ಲಿ ಹೋಗಿದೆ ಎಂಬುದುನ್ನು ಕೇಂದ್ರ ಸರ್ಕಾರ ದೇಶದ ಜನರಿಗೆ ತಿಳಿಸಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ವೈದ್ಯರ ಘಟಕದ ಅಧ್ಯಕ್ಷ ಡಾ.ಶೇಖರ್ ಪೂಜಾರಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಟ್ಟು ಉತ್ಪಾದನೆಯಾದ 34 ಕೋಟಿ ಲಸಿಕೆಯಲ್ಲಿ ಇದುವರೆಗೆ 21 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. 6 ಕೋಟಿ ಲಸಿಕೆ ವಿದೇಶಗಳಿಗೆ ನೀಡಲಾಗಿದೆ. ಇನ್ನುಳಿದ ಲಸಿಕೆ ಎಲ್ಲಿ ಹೋಗಿದೆ ಎಂಬ ಮಾಹಿತಿ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಪ್ರಮುಖರಾದ ಶುಭೋದಯ ಆಳ್ವ , ಪ್ರಕಾಶ್ ಸಾಲ್ಯಾನ್, ಗಣೇಶ ಪೂಜಾರಿ, ನಿತ್ಯಾನಂದ ಸೆಟ್ಟಿ, ಯೋಗೀಶ್ ಕುಮಾರ್, ಆರಿಫ್ ಬಾವಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.