ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

58 ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ

Last Updated 30 ಅಕ್ಟೋಬರ್ 2019, 15:41 IST
ಅಕ್ಷರ ಗಾತ್ರ

ಮಂಗಳೂರು: ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸಲು 60 ವಾರ್ಡ್‌ಗಳ ಪೈಕಿ, 58 ವಾರ್ಡ್‌ಗಳಿಗೆ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್‌ ಬುಧವಾರ ಬಿಡುಗಡೆ ಮಾಡಿದ್ದಾರೆ.

ದೇರೆಬೈಲ್ ಉತ್ತರ ಹಾಗೂ ಮಂಗಳಾದೇವಿ ವಾರ್ಡ್‌ನಿಂದ ಸ್‍ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮ ಮಾಡಿಲ್ಲ. ಮಹಾಬಲ ಮಾರ್ಲ ಹೊರತುಪಡಿಸಿ, ಉಳಿದ ನಾಲ್ವರು ಮಾಜಿ ಮೇಯರ್‌ಗಳಿಗೆ ಟಿಕೆಟ್‌ ಖಚಿತವಾಗಿದೆ.

ಸುರತ್ಕಲ್ ಪಶ್ಚಿಮ ವಾರ್ಡ್‌ನಿಂದ ಶಾಂತಾ ಎಸ್.ರಾವ್, ಸುರತ್ಕಲ್ ಪೂರ್ವ ವಾರ್ಡ್‌ನಿಂದ ಇಂದಿರಾ, ಕಾಟಿಪಳ್ಳ ಪೂರ್ವ ವಾರ್ಡ್‌ನಿಂದ ಬಷೀರ್ ಅಹಮದ್, ಕಾಟಿಪಳ್ಳ ಕೃಷ್ಣಾಪುರ ವಾರ್ಡ್‌ನಿಂದ ಸವಿತಾ ಶೆಟ್ಟಿ, ಕಾಟಿಪಳ್ಳ ಉತ್ತರದಿಂದ ಫಾತಿಮಾ ಬಿ., ಇಡ್ಯಾ ಪೂರ್ವ ವಾರ್ಡ್‌ನಿಂದ ವಿನಿತಾ ರಾವ್, ಇಡ್ಯಾ ಪಶ್ಚಿಮದಿಂದ ಪ್ರತಿಭಾ ಕುಳಾಯಿ, ಹೊಸಬೆಟ್ಟು ವಾರ್ಡ್‌ನಿಂದ ಅಶೋಕ್ ಶೆಟ್ಟಿ, ಕುಳಾಯಿ ವಾರ್ಡ್‌ನಿಂದ ಗಾಯತ್ರಿ ಅರನ್ಹ, ಬೈಕಂಪಾಡಿಯಿಂದ ಸುಧಾಕರ, ಪಣಂಬೂರು ಬೆಂಗ್ರೆ ವಾರ್ಡ್‌ನಿಂದ ಚಂದ್ರಿಕಾ, ಪಂಜಿಮೊಗರುದಿಂದ ಅನಿಲ್ ಕುಮಾರ್, ಕುಂಜತ್ತಬೈಲ್ ಉತ್ತರದಿಂದ ಕೆ.ಮಹಮ್ಮದ್, ಮರಕಡ ವಾರ್ಡ್‌ನಿಂದ ಹರಿನಾಥ, ಕುಂಜತ್ತ್‍ಬೈಲ್ ದಕ್ಷಿಣದಿಂದ ಶಾಲಿನಿ ಎಂ.ಎನ್., ಬಂಗ್ರ ಕೂಳೂರಿನಿಂದ ಪಾಂಡುರಂಗ ಕುಕ್ಯಾನ್, ಕಾವೂರು ಭವ್ಯಾ, ಪಚ್ಚನಾಡಿಯಿಂದ ಕವಿತಾ ಸನಿಲ್/ವಿಶಾಲಾಕ್ಷಿ, ತಿರುವೈಲ್ ವಾರ್ಡ್‌ನಿಂದ ಪ್ರತಿಭಾ ಆರ್.ಶೆಟ್ಟಿ, ಪದವು ಪಶ್ಚಿಮದಿಂದ ಆಶಾಲತಾ, ಕದ್ರಿ ಪದವು ವಾರ್ಡ್‌ನಿಂದ ಉಮೇಶ್, ದೇರೆಬೈಲ್ ಪೂರ್ವದಿಂದ ಜ್ಯೋತಿ ಎಲ್.ದೇವಾಡಿಗ ಅವರಿಗೆ ಟಿಕೆಟ್‌ ನೀಡಲಾಗಿದೆ.

ದೇರೆಬೈಲ್ ದಕ್ಷಿಣದಿಂದ ಎಂ.ಶಶಿಧರ್ ಹೆಗ್ಡೆ, ದೇರೆಬೈಲು ಪಶ್ಚಿಮದಿಂದ ರೂಪಾ ಚೇತನ್, ದೇರೆಬೈಲು ನೈರುತ್ಯದಿಂದ ಬಿ.ಪದ್ಮನಾಭ ಅಮೀನ್, ಬೋಳೂರು ವಾರ್ಡ್‌ನಿಂದ ಕಮಲಾಕ್ಷ ಸಾಲ್ಯಾನ್, ಮಣ್ಣಗುಡ್ಡೆ ವಾರ್ಡ್‌ನಿಂದ ಮೇಘನಾ ದಾಸ್, ಕಂಬ್ಳದಿಂದ ರೇಖಾ ಸುರೇಖಾ, ಕೊಡಿಯಾಲಬೈಲ್ ವಾರ್ಡ್‌ನಿಂದ ಪ್ರಕಾಶ್ ಬಿ.ಸಾಲ್ಯಾನ್, ಬಿಜೈನಿಂದ ಲ್ಯಾನ್ಸಿ ಲೋಟ್ ಪಿಂಟೋ, ಕದ್ರಿ ಉತ್ತರದಿಂದ ಮಮತಾ ಶೆಟ್ಟಿ, ಕದ್ರಿ ದಕ್ಷಿಣದಿಂದ ಅಶೋಕ್ ಕುಮಾರ್ ಡಿ.ಕೆ., ಶಿವಬಾಗ್ ವಾರ್ಡ್‌ನಿಂದ ಕಿರಣ ಜೇಮ್ಸ್ ಪೀಟರ್, ಪದವು ಸೆಂಟ್ರಲ್ ವಾರ್ಡ್‌ನಿಂದ ಅಬ್ದುಲ್ ಅಜೀಜ್, ಪದವು ಪೂರ್ವದಿಂದ ಭಾಸ್ಕರ್ ಕೆ., ಮರೋಳಿ ವಾರ್ಡ್‌ನಿಂದ ಕೇಶವ, ಬೆಂದೂರ್ ವಾರ್ಡ್‌ನಿಂದ ನವೀನ್ ಆರ್.ಡಿಸೋಜ, ಫಳ್ನೀರ್‌ನಿಂದ ಜೆಸಿಂತಾ ವಿಜಯ ಆಲ್ಫ್ರೇಡ್, ಕೋರ್ಟ್ ವಾರ್ಡ್‌ನಿಂದ ಎ.ಸಿ ವಿನಯರಾಜ್, ಸೆಂಟ್ರಲ್ ಮಾರ್ಕೆಟ್ ವಾರ್ಡ್‌ನಿಂದ ಮಮತಾ ಶೆಣೈ, ಡೊಂಗರಕೇರಿ ವಾರ್ಡ್‌ನಿಂದ ಮಂಜುಳಾ ವೈ. ನಾಯಕ್, ಕುದ್ರೋಳಿಯಿಂದ ಶಂಶುದ್ಧೀನ್, ಬಂದರ್ ವಾರ್ಡ್‌ನಿಂದ ಝೀನತ್, ಪೋರ್ಟ್ ವಾರ್ಡ್‌ನಿಂದ ಅಬ್ದುಲ್ ಲತೀಫ್, ಕಂಟೋನ್ಮೆಂಟ್ ವಾರ್ಡ್‌ನಿಂದ ಕೆ.ಭಾಸ್ಕರ್ ರಾವ್, ಮಿಲಾಗ್ರಿಸ್‌ದಿಂದ ಅಬ್ದುಲ್ ರವೂಫ್, ಕಂಕನಾಡಿ ವೆಲೆನ್ಸಿಯಾ ವಾರ್ಡ್‌ನಿಂದ ಆಶಿತ್ ಗ್ರೇಗರಿ ಪಿರೇರಾ, ಕಂಕನಾಡಿ ವಾರ್ಡ್‌ನಿಂದ ಪ್ರವೀಣ್ ಚಂದ್ರ ಆಳ್ವ, ಅಳಪೆ ದಕ್ಷಿಣದಿಂದ ಸೇಸಮ್ಮ, ಅಳಪೆ ಉತ್ತರದಿಂದ ಶೋಭಾ ಕೆ., ಕಣ್ಣೂರು ವಾರ್ಡ್‌ನಿಂದ ರಝೀಯಾ, ಬಜಾಲ್‌ದಿಂದ ಅಶ್ರಫ್, ಜಪ್ಪಿನಮೊಗರು ವಾರ್ಡ್‌ನಿಂದ ಮಧುಶ್ರೀ, ಅತ್ತಾವರದಿಂದ ಕೀರ್ತಿರಾಜ್, ಹೊಯಗೆ ಬಜಾರ್ ವಾರ್ಡ್‌ನಿಂದ ಮೊಗವೀರ ಶರ್ಮಿಳಾ, ಬೋಳಾರದಿಂದ ರತಿಕಲಾ, ಜೆಪ್ಪು ವಾರ್ಡ್‌ನಿಂದ ಟಿ.ಹೊನ್ನಯ್ಯ, ಬೆಂಗ್ರೆ ವಾರ್ಡ್‌ನಿಂದ ಆಸಿಫ್ ಅಹಮದ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT