ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸರು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಅವರ ಕರ್ತವ್ಯ ಮಾಡಿದ್ದಾರೆ. ಅದಕ್ಕೆ ಅಡ್ಡಿಪಡಿಸಿದ ಶಾಸಕರ ಮೇಲೆ ಪ್ರಕರಣ ದಾಖಲಿಸಿ ನೋಟಿಸ್ ನೀಡಲು ಮನೆಗೆ ತೆರಳಿದ್ದಾರೆ. ಆದರೆ, ಹರೀಶ್ ಪೂಂಜ ಅವರು ಸಾಮಾನ್ಯ ಪ್ರಕರಣಕ್ಕೆ ಕಾರ್ಯಕರ್ತರನ್ನು, ವಕೀಲರನ್ನು ಮನೆಗೆ ಕರೆಸಿದ್ದಾರೆ’ ಎಂದು ಟೀಕಿಸಿದರು.