ವೃದ್ಧರು,ಮಾನಸಿಕಅಸ್ವಸ್ಥರು,ನಿರ್ಗತಿಕರಿರುವ ಈ ಆಶ್ರಮದಲ್ಲಿ 270 ಮಂದಿ ವಾಸ್ತವ್ಯ ಇದ್ದು, ಈ ಪೈಕಿ 195 ಮಂದಿಗೆ ನಾಲ್ಕು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಶಾಸಕ ಹರೀಶ್ ಪೂಂಜ ಅವರ ಸಲಹೆಯಂತೆ 135 ಸೋಂಕಿತರನ್ನು ಈಗಾಗಲೇ ಧರ್ಮಸ್ಥಳದಲ್ಲಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನಾಲ್ವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹಾಗೂ ಮೂವರನ್ನು ಬೆಳ್ತಂಗಡಿಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.