ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ | ಆಗಂತುಕನಿಂದ ವಿಷಪ್ರಾಷನ: ಒಂದು ದನ, 9 ನಾಯಿಗಳ ಸಾವು

Published 17 ಆಗಸ್ಟ್ 2023, 9:27 IST
Last Updated 17 ಆಗಸ್ಟ್ 2023, 9:27 IST
ಅಕ್ಷರ ಗಾತ್ರ

ಉಳ್ಳಾಲ: ತಲಪಾಡಿ ಅಲಂಕಾರುಗುಡ್ಡೆ ಎಂಬಲ್ಲಿ ವಿಷಪ್ರಾಷನದಿಂದ ಒಂದು ದನ ಹಾಗೂ 9 ನಾಯಿಗಳು ಮೃತಪಟ್ಟಿವೆ.

ಅಲಂಕಾರುಗುಡ್ಡೆ ನಿವಾಸಿ ಸತ್ಯೇಂದ್ರ ಎಂಬವರಿಗೆ ಸೇರಿದ ಹಾಲು ನೀಡುವ ದನ ಹಾಗೂ ಸ್ಥಳೀಯರ ನಾಯಿಗಳು ಎರಡು ದಿನಗಳಲ್ಲಿ ಅಸುನೀಗಿವೆ.

ಆಗಂತುಕನೊಬ್ಬ ರಸ್ತೆ ಬದಿಯಲ್ಲಿ ನಾಯಿಗಳಿಗೆ ಆಹಾರ ಹಾಕುತ್ತಾ ಹೋಗಿದ್ದ. ನಂತರದ ದಿನಗಳಲ್ಲಿ ಅಲ್ಲಲ್ಲಿ ನಾಯಿಗಳು ಸತ್ತುಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ‌. ಕೆಲವು ನಾಯಿಗಳ ಕಳೇಬರ ಕೊಳೆತು ದುರ್ನಾತ ಬೀರುತ್ತಿದೆ. ಕೆಲವು ನಾಯಿಗಳನ್ನು ಸ್ಥಳೀಯರು ಮಣ್ಣಲ್ಲಿ ಹೂತಿದ್ದಾರೆ. ಈ ಕೃತ್ಯದ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT