<p><strong>ಸುರತ್ಕಲ್</strong>: ಪಣಂಬೂರು, ಬೈಕಂಪಾಡಿ ಪ್ರದೇಶದಲ್ಲಿ ಓಡಾಡಿಕೊಂಡಿರುವ ಗೂಳಿಯೊಂದರ ಕಣ್ಣಿನ ಭಾಗಕ್ಕೆ ಉದ್ದವಾಗಿ ಬೆಳೆದ ಅದರದ್ದೇ ಕೊಂಬು ತೀವ್ರ ಸಮಸ್ಯೆಯಾಗಿ ಕಾಡಿತ್ತು. ಸುರತ್ಕಲ್ ಪ್ರಖಂಡರ ಬಜರಂಗದಳದ ಕಾರ್ಯಕರ್ತರು ಗೂಳಿಯ ಕೊಂಬನ್ನು ಕತ್ತರಿಸುವ ಮೂಲಕ ಮಾನವೀಯತೆ ಮೆರೆದರು.</p>.<p>ಗೂಳಿಯ ಕಣ್ಣಿನ ಭಾಗಕ್ಕೆ ಕೊಂಬು ಚುಚ್ಚುಕೊಂಡಿರುವುದು ಸ್ಥಳೀಯರಿಗೆ ಹಲವು ದಿನಗಳ ಮೊದಲೇ ಗೊತ್ತಾಗಿತ್ತು. ಅದಕ್ಕಾಗಿ ವೈದ್ಯಾಧಿಕಾರಿಗಳು, ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರ ನೆರವಿನಿಂದ ಗೂಳಿಯನ್ನು ಹಿಡಿಯಲು ಈ ಹಿಂದೆ ಪ್ರಯತ್ನಿಸಿದರೂ ಕಾರ್ಯಾಚರಣೆ ವಿಫಲಗೊಂಡಿತ್ತು.</p>.<p>ಸೋಮವಾರ ಮತ್ತೆ ಸುರತ್ಕಲ್ ಪ್ರಖಂಡದ ಬಜರಂಗದಳದ ಕಾರ್ಯಕರ್ತರು ಬೆಳಿಗ್ಗೆ 5ಗ೦ಟೆಯಿಂದ ಕಾರ್ಯಾಚರಣೆಗೆ ಇಳಿದಿದ್ದು, ಮಧ್ಯಾಹ್ನ ಸುಮಾರು ಮಧ್ಯಾಹ್ನ 2.30 ಗ೦ಟೆಯ ವರೆಗೂ ಶ್ರಮಪಟ್ಟು ಯಾವುದೇ ರೀತಿಯ ಅರಿವಳಿಕೆ ಚುಚ್ಚುಮದ್ದು ನೀಡದೇಹಗ್ಗದ ಸಹಾಯದಿಂದ ಹಿಡಿಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.</p>.<p>ಬಳಿಕ ಪಶುವೈದ್ಯಾಧಿಕಾರಿಗಳ ನೆರವಿನಿಂದ ಗೂಳಿಯ ಕಣ್ಣಿನ ಭಾಗಕ್ಕೆ ಅಡ್ಡಿಯಾದ ಕೊಂಬನ್ನು ಕತ್ತರಿಸಿ ತೆಗೆದು, ಗೂಳಿಯ ಕಣ್ಣನ್ನು ರಕ್ಷಿಸಲಾಯಿತು. ಆಯಾಸಗೊಂಡಿದ್ದ ಗೂಳಿಗೆ ಬಳಿಕ ನೀರು, ಮೇವನ್ನು ನೀಡಿ ಉಪಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್</strong>: ಪಣಂಬೂರು, ಬೈಕಂಪಾಡಿ ಪ್ರದೇಶದಲ್ಲಿ ಓಡಾಡಿಕೊಂಡಿರುವ ಗೂಳಿಯೊಂದರ ಕಣ್ಣಿನ ಭಾಗಕ್ಕೆ ಉದ್ದವಾಗಿ ಬೆಳೆದ ಅದರದ್ದೇ ಕೊಂಬು ತೀವ್ರ ಸಮಸ್ಯೆಯಾಗಿ ಕಾಡಿತ್ತು. ಸುರತ್ಕಲ್ ಪ್ರಖಂಡರ ಬಜರಂಗದಳದ ಕಾರ್ಯಕರ್ತರು ಗೂಳಿಯ ಕೊಂಬನ್ನು ಕತ್ತರಿಸುವ ಮೂಲಕ ಮಾನವೀಯತೆ ಮೆರೆದರು.</p>.<p>ಗೂಳಿಯ ಕಣ್ಣಿನ ಭಾಗಕ್ಕೆ ಕೊಂಬು ಚುಚ್ಚುಕೊಂಡಿರುವುದು ಸ್ಥಳೀಯರಿಗೆ ಹಲವು ದಿನಗಳ ಮೊದಲೇ ಗೊತ್ತಾಗಿತ್ತು. ಅದಕ್ಕಾಗಿ ವೈದ್ಯಾಧಿಕಾರಿಗಳು, ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರ ನೆರವಿನಿಂದ ಗೂಳಿಯನ್ನು ಹಿಡಿಯಲು ಈ ಹಿಂದೆ ಪ್ರಯತ್ನಿಸಿದರೂ ಕಾರ್ಯಾಚರಣೆ ವಿಫಲಗೊಂಡಿತ್ತು.</p>.<p>ಸೋಮವಾರ ಮತ್ತೆ ಸುರತ್ಕಲ್ ಪ್ರಖಂಡದ ಬಜರಂಗದಳದ ಕಾರ್ಯಕರ್ತರು ಬೆಳಿಗ್ಗೆ 5ಗ೦ಟೆಯಿಂದ ಕಾರ್ಯಾಚರಣೆಗೆ ಇಳಿದಿದ್ದು, ಮಧ್ಯಾಹ್ನ ಸುಮಾರು ಮಧ್ಯಾಹ್ನ 2.30 ಗ೦ಟೆಯ ವರೆಗೂ ಶ್ರಮಪಟ್ಟು ಯಾವುದೇ ರೀತಿಯ ಅರಿವಳಿಕೆ ಚುಚ್ಚುಮದ್ದು ನೀಡದೇಹಗ್ಗದ ಸಹಾಯದಿಂದ ಹಿಡಿಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.</p>.<p>ಬಳಿಕ ಪಶುವೈದ್ಯಾಧಿಕಾರಿಗಳ ನೆರವಿನಿಂದ ಗೂಳಿಯ ಕಣ್ಣಿನ ಭಾಗಕ್ಕೆ ಅಡ್ಡಿಯಾದ ಕೊಂಬನ್ನು ಕತ್ತರಿಸಿ ತೆಗೆದು, ಗೂಳಿಯ ಕಣ್ಣನ್ನು ರಕ್ಷಿಸಲಾಯಿತು. ಆಯಾಸಗೊಂಡಿದ್ದ ಗೂಳಿಗೆ ಬಳಿಕ ನೀರು, ಮೇವನ್ನು ನೀಡಿ ಉಪಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>