<p><strong>ಹಗರಿಬೊಮ್ಮನಹಳ್ಳಿ</strong>: ತಾಲ್ಲೂಕಿನ ಬಾಚಿಗೊಂಡನಹಳ್ಳಿ, ಅಂಕಸಮುದ್ರ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಹಾದು ಹೋಗಿರುವ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿದ್ಯುತ್ ತಂತಿಗಳ ಸ್ಪರ್ಶವಾಗಿ ಬಾನಾಡಿಗಳು ಜೀವ ಬಿಡುತ್ತಿವೆ.</p>.<p>ಕಳೆದ ಎರಡು ದಿನಗಳಲ್ಲಿ 20ಕ್ಕೂ ಹೆಚ್ಚು ಪಕ್ಷಿಗಳು ಸತ್ತಿವೆ. ಪ್ರತಿ ವರ್ಷ ಹಕ್ಕಿಗಳ ವಲಸೆ ಸಂದರ್ಭದಲ್ಲಿ ಈ ಅವಘಡ ಸಂಭವಿಸುತ್ತಲೇ ಇರುತ್ತದೆ.</p>.<p>ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶ. ಕೆರೆಗಳು, ತುಂಗಭದ್ರಾ ಹಿನ್ನೀರು ಪ್ರದೇಶಗಳಿಗೆ ಪಕ್ಷಿಗಳ ವಲಸೆ ಆರಂಭ ಆಗಿರುವ ಬೆನ್ನಲ್ಲೇ ಹಕ್ಕಿಗಳ ಸಾವು ಪಕ್ಷಿಪ್ರಿಯರ ಮನಕಲಕಿದೆ. ಎತ್ತರದ ವಿದ್ಯುತ್ ಟವ ರ್ಗಳ ತಂತಿಗಳು ಪಕ್ಷಿಗಳಿಗೆ ಸಾವಿನ ಕುಣಿಕೆ ಒಡ್ಡಿದಂತಿದೆ. ಈ ಹೈಟೆ ನ್ಷನ್ ವಿದ್ಯುತ್ ಕಂಬಗಳು ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಿಂದ ಮೂರು ಕಿ.ಮೀ. ಅಂತರದಲ್ಲೇ ಹಾದು ಹೋಗಿವೆ.</p>.<p>ಹಕ್ಕಿಗಳು ಹಾದು ಹೋಗುವ ಮಾರ್ಗಗಳನ್ನು ಗುರುತಿಸಿ ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ಬೆಳಕಿನ ಫಲಕ (ರಿಫ್ಲೆಕ್ಟರ್) ಅಳವಡಿಸಿದರೆ ಮಾತ್ರ ಬಾನಾಡಿಗಳನ್ನು ಪಾರು ಮಾಡ ಬಹು ದು. ಅರಣ್ಯ ಇಲಾಖೆ ತಜ್ಞರ ತಂಡ ವನ್ನು ಬಳಸಿಕೊಳ್ಳಬೇಕು ಎಂದು ಪಕ್ಷಿ ಪ್ರೇಮಿ ವಿಜಯಕುಮಾರ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ</strong>: ತಾಲ್ಲೂಕಿನ ಬಾಚಿಗೊಂಡನಹಳ್ಳಿ, ಅಂಕಸಮುದ್ರ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಹಾದು ಹೋಗಿರುವ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿದ್ಯುತ್ ತಂತಿಗಳ ಸ್ಪರ್ಶವಾಗಿ ಬಾನಾಡಿಗಳು ಜೀವ ಬಿಡುತ್ತಿವೆ.</p>.<p>ಕಳೆದ ಎರಡು ದಿನಗಳಲ್ಲಿ 20ಕ್ಕೂ ಹೆಚ್ಚು ಪಕ್ಷಿಗಳು ಸತ್ತಿವೆ. ಪ್ರತಿ ವರ್ಷ ಹಕ್ಕಿಗಳ ವಲಸೆ ಸಂದರ್ಭದಲ್ಲಿ ಈ ಅವಘಡ ಸಂಭವಿಸುತ್ತಲೇ ಇರುತ್ತದೆ.</p>.<p>ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶ. ಕೆರೆಗಳು, ತುಂಗಭದ್ರಾ ಹಿನ್ನೀರು ಪ್ರದೇಶಗಳಿಗೆ ಪಕ್ಷಿಗಳ ವಲಸೆ ಆರಂಭ ಆಗಿರುವ ಬೆನ್ನಲ್ಲೇ ಹಕ್ಕಿಗಳ ಸಾವು ಪಕ್ಷಿಪ್ರಿಯರ ಮನಕಲಕಿದೆ. ಎತ್ತರದ ವಿದ್ಯುತ್ ಟವ ರ್ಗಳ ತಂತಿಗಳು ಪಕ್ಷಿಗಳಿಗೆ ಸಾವಿನ ಕುಣಿಕೆ ಒಡ್ಡಿದಂತಿದೆ. ಈ ಹೈಟೆ ನ್ಷನ್ ವಿದ್ಯುತ್ ಕಂಬಗಳು ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಿಂದ ಮೂರು ಕಿ.ಮೀ. ಅಂತರದಲ್ಲೇ ಹಾದು ಹೋಗಿವೆ.</p>.<p>ಹಕ್ಕಿಗಳು ಹಾದು ಹೋಗುವ ಮಾರ್ಗಗಳನ್ನು ಗುರುತಿಸಿ ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ಬೆಳಕಿನ ಫಲಕ (ರಿಫ್ಲೆಕ್ಟರ್) ಅಳವಡಿಸಿದರೆ ಮಾತ್ರ ಬಾನಾಡಿಗಳನ್ನು ಪಾರು ಮಾಡ ಬಹು ದು. ಅರಣ್ಯ ಇಲಾಖೆ ತಜ್ಞರ ತಂಡ ವನ್ನು ಬಳಸಿಕೊಳ್ಳಬೇಕು ಎಂದು ಪಕ್ಷಿ ಪ್ರೇಮಿ ವಿಜಯಕುಮಾರ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>