ಸುರತ್ಕಲ್: ನಾಟ್ಯಶಾಸ್ತ್ರ ದೇವತಾ ಮೂಲದ ಕಲೆಯಾಗಿದ್ದು ಈ ಕಾರಣದಿಂದ ಗೌರವದಿಂದ ಕಾಣಲಾಗುತ್ತಿದೆ ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ ನುಡಿದರು.
ಅವರು ಇತ್ತೀಚೆಗೆ ನಗರದ ಡಾನ್ ಬಾಸ್ಕೋ ಹಾಲ್ನಲ್ಲಿ ಕೊಟ್ಟಾರದ ಭರತಾಂಜಲಿ ಸಂಸ್ಥೆ ಆಯೋಜಿಸಿದ್ದ ಕಿನ್ನಿಗೋಳಿ ಶಿವಪ್ರಣಾಮ್ ಸಂಸ್ಥೆಯ ನೃತ್ಯ ಶಿಕ್ಷಕಿ ವಿದುಷಿ ಅನ್ನಪೂರ್ಣ ರಿತೇಶ್ ಅವರ ನೃತ್ಯ ಸಂಧ್ಯಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ನೃತ್ಯ ಗುರು ವಿದುಷಿ ಶೀಲಾ ಚಂದ್ರಶೇಖರ್ ನೃತ್ಯಕಲಾವಿದರು ಅಭಿನಯ ಪಕ್ವತೆ, ಖಚಿತ ಆಂಗಿಕ ಚಲನೆ ಮತ್ತು ಹಸ್ತಮುದ್ರೆಗಳಿಗೆ ಮಹತ್ವ ನೀಡಿ ಶುದ್ಧ ಅಡವುಗಳನ್ನು ಪ್ರದರ್ಶಿಸಬೇಕು ಎಂದರು.
ನಾಟ್ಯಾಚಾರ್ಯ ಗುರು ಮೋಹನ್ ಕುಮಾರ್ ಶುಭ ಕೋರಿದರು. ಗುರು ಕಮಲಾ ಭಟ್ ಇದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರುಅಧ್ಯಕ್ಷತೆ ವಹಿಸಿದ್ದರು. ರಿತೇಶ್ ಅಂಚನ್ ಸ್ವಾಗತಿಸಿ ಮಂಜುಳಾ ಶೆಟ್ಟಿ ನಿರೂಪಿಸಿದರು.