<p><strong>ಸುರತ್ಕಲ್:</strong> ನಾಟ್ಯಶಾಸ್ತ್ರ ದೇವತಾ ಮೂಲದ ಕಲೆಯಾಗಿದ್ದು ಈ ಕಾರಣದಿಂದ ಗೌರವದಿಂದ ಕಾಣಲಾಗುತ್ತಿದೆ ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ ನುಡಿದರು.</p>.<p>ಅವರು ಇತ್ತೀಚೆಗೆ ನಗರದ ಡಾನ್ ಬಾಸ್ಕೋ ಹಾಲ್ನಲ್ಲಿ ಕೊಟ್ಟಾರದ ಭರತಾಂಜಲಿ ಸಂಸ್ಥೆ ಆಯೋಜಿಸಿದ್ದ ಕಿನ್ನಿಗೋಳಿ ಶಿವಪ್ರಣಾಮ್ ಸಂಸ್ಥೆಯ ನೃತ್ಯ ಶಿಕ್ಷಕಿ ವಿದುಷಿ ಅನ್ನಪೂರ್ಣ ರಿತೇಶ್ ಅವರ ನೃತ್ಯ ಸಂಧ್ಯಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ನೃತ್ಯ ಗುರು ವಿದುಷಿ ಶೀಲಾ ಚಂದ್ರಶೇಖರ್ ನೃತ್ಯಕಲಾವಿದರು ಅಭಿನಯ ಪಕ್ವತೆ, ಖಚಿತ ಆಂಗಿಕ ಚಲನೆ ಮತ್ತು ಹಸ್ತಮುದ್ರೆಗಳಿಗೆ ಮಹತ್ವ ನೀಡಿ ಶುದ್ಧ ಅಡವುಗಳನ್ನು ಪ್ರದರ್ಶಿಸಬೇಕು ಎಂದರು.</p>.<p>ನಾಟ್ಯಾಚಾರ್ಯ ಗುರು ಮೋಹನ್ ಕುಮಾರ್ ಶುಭ ಕೋರಿದರು. ಗುರು ಕಮಲಾ ಭಟ್ ಇದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರುಅಧ್ಯಕ್ಷತೆ ವಹಿಸಿದ್ದರು. ರಿತೇಶ್ ಅಂಚನ್ ಸ್ವಾಗತಿಸಿ ಮಂಜುಳಾ ಶೆಟ್ಟಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್:</strong> ನಾಟ್ಯಶಾಸ್ತ್ರ ದೇವತಾ ಮೂಲದ ಕಲೆಯಾಗಿದ್ದು ಈ ಕಾರಣದಿಂದ ಗೌರವದಿಂದ ಕಾಣಲಾಗುತ್ತಿದೆ ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ ನುಡಿದರು.</p>.<p>ಅವರು ಇತ್ತೀಚೆಗೆ ನಗರದ ಡಾನ್ ಬಾಸ್ಕೋ ಹಾಲ್ನಲ್ಲಿ ಕೊಟ್ಟಾರದ ಭರತಾಂಜಲಿ ಸಂಸ್ಥೆ ಆಯೋಜಿಸಿದ್ದ ಕಿನ್ನಿಗೋಳಿ ಶಿವಪ್ರಣಾಮ್ ಸಂಸ್ಥೆಯ ನೃತ್ಯ ಶಿಕ್ಷಕಿ ವಿದುಷಿ ಅನ್ನಪೂರ್ಣ ರಿತೇಶ್ ಅವರ ನೃತ್ಯ ಸಂಧ್ಯಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ನೃತ್ಯ ಗುರು ವಿದುಷಿ ಶೀಲಾ ಚಂದ್ರಶೇಖರ್ ನೃತ್ಯಕಲಾವಿದರು ಅಭಿನಯ ಪಕ್ವತೆ, ಖಚಿತ ಆಂಗಿಕ ಚಲನೆ ಮತ್ತು ಹಸ್ತಮುದ್ರೆಗಳಿಗೆ ಮಹತ್ವ ನೀಡಿ ಶುದ್ಧ ಅಡವುಗಳನ್ನು ಪ್ರದರ್ಶಿಸಬೇಕು ಎಂದರು.</p>.<p>ನಾಟ್ಯಾಚಾರ್ಯ ಗುರು ಮೋಹನ್ ಕುಮಾರ್ ಶುಭ ಕೋರಿದರು. ಗುರು ಕಮಲಾ ಭಟ್ ಇದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರುಅಧ್ಯಕ್ಷತೆ ವಹಿಸಿದ್ದರು. ರಿತೇಶ್ ಅಂಚನ್ ಸ್ವಾಗತಿಸಿ ಮಂಜುಳಾ ಶೆಟ್ಟಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>