ಪೂರ್ಣಿಮಾ ಅವರು ಬುಧವಾರ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಹೋಗಿದ್ದರು. ಗುರುವಾರ ಬೆಳಿಗ್ಗೆ ಮನೆಗೆ ಮರಳಿದ್ದ ಅವರು, ಕಟ್ಟಿಹಾಕಿದ್ದ ನಾಯಿಯನ್ನು ಬಿಡಲು ಹೋಗಿದ್ದರು. ಆಗ ನಾಯಿ ಏಕಾಏಕಿ ಅವರ ಮೇಲೆರಗಿತ್ತು. ನಾಯಿ ಕಡಿತದಿಂದ ಮಹಿಳೆಯ ತಲೆಯ ಭಾಗ, ಕುತ್ತಿಗೆ, ಕೈ ಸೇರಿದಂತೆ ಸುಮಾರು 20ಕ್ಕಿಂತ ಹೆಚ್ಚು ಕಡೆಗಳಿಗೆ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.