<p><strong>ಮಂಗಳೂರು</strong>: ಕರಾವಳಿಯ ಕಡಲಿನಲ್ಲಿರುವ ಸೂಕ್ಷ್ಮಜೀವಿಗಳ ರಕ್ಷಣೆ ಹಾಗೂ ಅವುಗಳ ಅಧ್ಯಯನಕ್ಕಾಗಿ ಡಾಲ್ಫಿನ್ ಕನ್ಸರ್ವೇಶನ್ ಯೋಜನೆಯ ಪ್ರಸ್ತಾವವನ್ನು ಅರಣ್ಯ ಇಲಾಖೆಯು ತನ್ನ ಕೇಂದ್ರ ಕಚೇರಿಗೆ ಸಲ್ಲಿಸಿದೆ. ಅಲ್ಲಿಂದ ಕೇಂದ್ರ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಲಿದ್ದು, ನಂತರ ಯೋಜನೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹೇಳಿದ ಪ್ರಕಾರ ಈ ಯೋಜನೆಯ ರೂಪುರೇಷೆ ಸಿದ್ಧವಾಗುತ್ತಿದೆ. ಕೇಂದ್ರ ಅರಣ್ಯ ಇಲಾಖೆಯು ವಿವಿಧ ರಾಜ್ಯಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಅದರನ್ವಯ ಕರ್ನಾಟಕದ ಕರಾವಳಿಯ 320 ಕಿ.ಮೀ. ವ್ಯಾಪ್ತಿಯ ಕಡಲಿನಲ್ಲಿರುವ ಡಾಲ್ಫಿನ್ ಸೇರಿದಂತೆ 40 ರೀತಿಯ ಅತಿ ಸೂಕ್ಷ್ಮಜೀವಿಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.</p>.<p>ಕರ್ನಾಟಕದ ಕರಾವಳಿಯಲ್ಲಿ ಹಲವು ಬಾರಿ ಡಾಲ್ಫಿನ್ಗಳು ಪತ್ತೆಯಾಗಿದ್ದು, 1972 ರಿಂದ ಇಲ್ಲಿಯವರೆಗೆ 19 ಅತಿ ಸೂಕ್ಷ್ಮ ಸಸ್ತನಿಗಳು ಕಂಡುಬಂದಿವೆ. ಈ ಪೈಕಿ 11 ಬಲೀನ್ ವೇಲ್, 3 ವೇಲ್ ಶಾರ್ಕ್, 2 ಸ್ಮಾರ್ಟ್ ವೇಲ್, 1 ಬ್ಲೂವೇಲ್, 1 ಕ್ಯುವೇರಿಯಸ್ ಬಿಕ್ಅಡ್ ವೇಲ್ ಹಾಗೂ ಒಂದು ಬಾರಿ ಗಿಟಾರ್ ಫಿಶ್ಗಳು ಪತ್ತೆಯಾಗಿವೆ ಎಂದು ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಡಾ.ವೈ.ಕೆ. ದಿನೇಶ್ಕುಮಾರ್ ತಿಳಿಸಿದ್ದಾರೆ.</p>.<p>2006 ರಲ್ಲಿ ಕರ್ನಾಟಕ ಜೀವ ವೈವಿಧ್ಯತಾ ಮಂಡಳಿ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ರಾಜ್ಯ ಕರಾವಳಿಯಲ್ಲಿ 40 ಬಗೆಯ ಸೂಕ್ಷ್ಮ ಜೀವಿಗಳು ಪತ್ತೆಯಾಗಿವೆ. ಇದರಲ್ಲಿ 8 ಸಸ್ತನಿಗಳು, 3 ಬಗೆಯ ಕಡಲಾಮೆಗಳು, 3 ಜಾತಿ ಕಡಲ ಹಾವುಗಳು, 2 ಬಗೆಯ ಮೀನು, 3 ರೀತಿಯ ಕಪ್ಪೆಚಿಪ್ಪುಗಳು, ಸೀ ಕುಕುಂಬರ್, 14 ಬಗೆ ಕೋರೆಲ್ಸ್ ಮತ್ತು ನಾಲ್ಕು ಬಗೆಯ ಸ್ಪಾಂಜಸ್ಗಳು ಸೇರಿವೆ.</p>.<p class="Briefhead">‘<strong>ಜನರಲ್ಲಿ ಸಂರಕ್ಷಣೆಯ ಅರಿವು’</strong></p>.<p>ಮಂಗಳೂರು ಸೇರಿದಂತೆ ಕರಾವಳಿಯ ಕಡಲ ಕಿನಾರೆಗಳಲ್ಲಿ ಡಾಲ್ಫಿನ್ಗಳ ಮೃತದೇಹ ಪತ್ತೆಯಾಗುತ್ತಿದ್ದು, ಅವು ಯಾವ ಕಾರಣದಿಂದ ಸಾಯುತ್ತಿವೆ? ಎಷ್ಟು ಡಾಲ್ಫಿನ್ಗಳು ಇಲ್ಲಿವೆ? ಸಂರಕ್ಷಣೆ ಹೇಗೆ? ಎಂಬಿತ್ಯಾದಿ ವಿಷಯಗಳು ಆಗಾಗ್ಗೆ ಚರ್ಚೆಯಾಗುತ್ತಲೇ ಇವೆ. ಆದರೆ, ಇದುವರೆಗೆ ಈ ಬಗ್ಗೆ ಯಾವುದೇ ಅಧ್ಯಯನ ನಡೆದಿರಲಿಲ್ಲ.</p>.<p>‘ಡಾಲ್ಫಿನ್ಗಳನ್ನು ಗಮನದಲ್ಲಿಟ್ಟುಕೊಂಡು ಉಳಿದ ಸೂಕ್ಷ್ಮ ಜೀವಿಗಳ ಅಧ್ಯಯನ ಹಾಗೂ ಅವುಗಳ ಸಂರಕ್ಷಣೆಯ ಕುರಿತು ಮೀನುಗಾರರಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದೇ ಡಾಲ್ಫಿನ್ ಸಂರಕ್ಷಣೆ ಯೋಜನೆಯ ಉದ್ದೇಶ’ ಎಂದು ದಕ್ಷಿಣ ಕನ್ನಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಳನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಕರಾವಳಿಯ ಕಡಲಿನಲ್ಲಿರುವ ಸೂಕ್ಷ್ಮಜೀವಿಗಳ ರಕ್ಷಣೆ ಹಾಗೂ ಅವುಗಳ ಅಧ್ಯಯನಕ್ಕಾಗಿ ಡಾಲ್ಫಿನ್ ಕನ್ಸರ್ವೇಶನ್ ಯೋಜನೆಯ ಪ್ರಸ್ತಾವವನ್ನು ಅರಣ್ಯ ಇಲಾಖೆಯು ತನ್ನ ಕೇಂದ್ರ ಕಚೇರಿಗೆ ಸಲ್ಲಿಸಿದೆ. ಅಲ್ಲಿಂದ ಕೇಂದ್ರ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಲಿದ್ದು, ನಂತರ ಯೋಜನೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.</p>.<p>ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಹೇಳಿದ ಪ್ರಕಾರ ಈ ಯೋಜನೆಯ ರೂಪುರೇಷೆ ಸಿದ್ಧವಾಗುತ್ತಿದೆ. ಕೇಂದ್ರ ಅರಣ್ಯ ಇಲಾಖೆಯು ವಿವಿಧ ರಾಜ್ಯಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಅದರನ್ವಯ ಕರ್ನಾಟಕದ ಕರಾವಳಿಯ 320 ಕಿ.ಮೀ. ವ್ಯಾಪ್ತಿಯ ಕಡಲಿನಲ್ಲಿರುವ ಡಾಲ್ಫಿನ್ ಸೇರಿದಂತೆ 40 ರೀತಿಯ ಅತಿ ಸೂಕ್ಷ್ಮಜೀವಿಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.</p>.<p>ಕರ್ನಾಟಕದ ಕರಾವಳಿಯಲ್ಲಿ ಹಲವು ಬಾರಿ ಡಾಲ್ಫಿನ್ಗಳು ಪತ್ತೆಯಾಗಿದ್ದು, 1972 ರಿಂದ ಇಲ್ಲಿಯವರೆಗೆ 19 ಅತಿ ಸೂಕ್ಷ್ಮ ಸಸ್ತನಿಗಳು ಕಂಡುಬಂದಿವೆ. ಈ ಪೈಕಿ 11 ಬಲೀನ್ ವೇಲ್, 3 ವೇಲ್ ಶಾರ್ಕ್, 2 ಸ್ಮಾರ್ಟ್ ವೇಲ್, 1 ಬ್ಲೂವೇಲ್, 1 ಕ್ಯುವೇರಿಯಸ್ ಬಿಕ್ಅಡ್ ವೇಲ್ ಹಾಗೂ ಒಂದು ಬಾರಿ ಗಿಟಾರ್ ಫಿಶ್ಗಳು ಪತ್ತೆಯಾಗಿವೆ ಎಂದು ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಡಾ.ವೈ.ಕೆ. ದಿನೇಶ್ಕುಮಾರ್ ತಿಳಿಸಿದ್ದಾರೆ.</p>.<p>2006 ರಲ್ಲಿ ಕರ್ನಾಟಕ ಜೀವ ವೈವಿಧ್ಯತಾ ಮಂಡಳಿ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ರಾಜ್ಯ ಕರಾವಳಿಯಲ್ಲಿ 40 ಬಗೆಯ ಸೂಕ್ಷ್ಮ ಜೀವಿಗಳು ಪತ್ತೆಯಾಗಿವೆ. ಇದರಲ್ಲಿ 8 ಸಸ್ತನಿಗಳು, 3 ಬಗೆಯ ಕಡಲಾಮೆಗಳು, 3 ಜಾತಿ ಕಡಲ ಹಾವುಗಳು, 2 ಬಗೆಯ ಮೀನು, 3 ರೀತಿಯ ಕಪ್ಪೆಚಿಪ್ಪುಗಳು, ಸೀ ಕುಕುಂಬರ್, 14 ಬಗೆ ಕೋರೆಲ್ಸ್ ಮತ್ತು ನಾಲ್ಕು ಬಗೆಯ ಸ್ಪಾಂಜಸ್ಗಳು ಸೇರಿವೆ.</p>.<p class="Briefhead">‘<strong>ಜನರಲ್ಲಿ ಸಂರಕ್ಷಣೆಯ ಅರಿವು’</strong></p>.<p>ಮಂಗಳೂರು ಸೇರಿದಂತೆ ಕರಾವಳಿಯ ಕಡಲ ಕಿನಾರೆಗಳಲ್ಲಿ ಡಾಲ್ಫಿನ್ಗಳ ಮೃತದೇಹ ಪತ್ತೆಯಾಗುತ್ತಿದ್ದು, ಅವು ಯಾವ ಕಾರಣದಿಂದ ಸಾಯುತ್ತಿವೆ? ಎಷ್ಟು ಡಾಲ್ಫಿನ್ಗಳು ಇಲ್ಲಿವೆ? ಸಂರಕ್ಷಣೆ ಹೇಗೆ? ಎಂಬಿತ್ಯಾದಿ ವಿಷಯಗಳು ಆಗಾಗ್ಗೆ ಚರ್ಚೆಯಾಗುತ್ತಲೇ ಇವೆ. ಆದರೆ, ಇದುವರೆಗೆ ಈ ಬಗ್ಗೆ ಯಾವುದೇ ಅಧ್ಯಯನ ನಡೆದಿರಲಿಲ್ಲ.</p>.<p>‘ಡಾಲ್ಫಿನ್ಗಳನ್ನು ಗಮನದಲ್ಲಿಟ್ಟುಕೊಂಡು ಉಳಿದ ಸೂಕ್ಷ್ಮ ಜೀವಿಗಳ ಅಧ್ಯಯನ ಹಾಗೂ ಅವುಗಳ ಸಂರಕ್ಷಣೆಯ ಕುರಿತು ಮೀನುಗಾರರಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದೇ ಡಾಲ್ಫಿನ್ ಸಂರಕ್ಷಣೆ ಯೋಜನೆಯ ಉದ್ದೇಶ’ ಎಂದು ದಕ್ಷಿಣ ಕನ್ನಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಾಳನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>