ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಎನ್ಪಿಟಿ ಅಧ್ಯಕ್ಷೆ ಡಾ.ಪದ್ಮಜಾ ಉದಯ್ಕುಮಾರ್, ‘ಸಮಕಾಲೀನ ಬೆಳವಣಿಗೆಗೆ ಅನುಗುಣವಾಗಿ ಔಷಧ ವಿಜ್ಞಾನದ ಪರಿಣತಿ’ ಕುರಿತು ಔಷಧ ವಿಜ್ಞಾನ ತಜ್ಞರು ಸಮ್ಮೇಳನದಲ್ಲಿ ವಿಚಾರ ಮಂಡಿಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಔಷಧ ವಿಜ್ಞಾನ ಕ್ಷೇತ್ರದ ಪರಿಣಿತರು ಭಾಗವಹಿಸಲಿದ್ದಾರೆ. ಯೆನಪೋಯ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ವಿಜಯ ಕುಮಾರ್, ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಲೊ ಅಧ್ಯಕ್ಷತೆ ವಹಿಸಲಿದ್ದಾರೆ. ಪೂರ್ವ ಸಮ್ಮೇಳನ ಕಾರ್ಯಾಗಾರವು ಇದೇ 27ರಂದು ನಡೆಯಲಿದೆ’ ಎಂದರು.