<p><strong>ಮಂಗಳೂರು:</strong> ಮಂಗಳೂರು ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಗಿ ಶುಲ್ಕ ಪಾವತಿಸುವ ಸಲುವಾಗಿ ದಲ್ಲಾಳಿಯೊಬ್ಬರು ವ್ಯಾಪಾರಿಗಳಿಂದ ಹಣ ಪಡೆದು, ನಕಲಿ ದಾಖಲೆ ನೀಡಿ ವಂಚಿಸಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಪಡೀಲ್ ಬಳಿಯ ಬಜಾಲ್ನ ಪಿಠೋಪಕರಣ ವರ್ಕ್ಶಾಪ್ನ ಮಾಲೀಕರೊಬ್ಬರಿಗೆ ನ್ಯಾಯಾಲಯಕ್ಕೆ ಸಲ್ಲಿಸಲು 15 ವರ್ಷಗಳ ಉದ್ದಿಮೆ ಪರವಾನಗಿ ದಾಖಲಾತಿಗಳು ಬೇಕಾಗಿದ್ದವು. ಅದನ್ನು ಪಡೆಯಲು ಅವರು ಪಾಲಿಕೆ ಕಚೇರಿಗೆ ತೆರಳಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.</p>.<p>‘ವರ್ಕ್ಶಾಪ್ನ ಉದ್ದಿಮೆ ಪರವಾನಗಿ ದಾಖಲೆ ಪಡೆಯಲು ಪಾಲಿಕೆ ಕಚೇರಿಗೆ ಹೋಗಿದ್ದೆವು. ಈ ವರ್ಷದ ಉದ್ದಿಮೆ ಪರವಾನಗಿ ನವೀಕರಣ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಏಜೆಂಟ್ ಮೂಲಕ ಶುಲ್ಕ ಕಟ್ಟಿ ಪರವಾನಗಿ ನವೀಕರಿಸಿದ್ದೇವೆ ಎಂದು ಉದ್ದಿಮೆ ಪರವಾನಗಿಯ ಪ್ರತಿಯನ್ನು ಅಧಿಕಾರಿಗಳಿಗೆ ತೋರಿಸಿದೆವು. ಪಾಲಿಕೆಯಿಂದ ನೀಡುವ ಉದ್ದಿಮೆ ಪರವಾನಗಿಯ ತರಹವೇ ಕಾಣುತ್ತಿದ್ದ ಆ ದಾಖಲೆ ನೋಡಿ ಸ್ವತಃ ಪಾಲಿಕೆ ಅಧಿಕಾರಿಗಳೂ ಅವಾಕ್ಕಾದರು. ಅದರೆ, ಪಾಲಿಕೆ ದಾಖಲೆಗಳಲ್ಲಿ ನಮ್ಮ ವರ್ಕ್ಶಾಪ್ನ ಉದ್ದಿಮೆ ಪರವಾನಗಿ ನವೀಕರಿಸಿದ ವಿವರ ದಾಖಲಾಗಿರಲಿಲ್ಲ’ ಎಂದು ಸಂತ್ರಸ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವಂಚನೆ ಮಾಡಿರುವ ದಲ್ಲಾಳಿ ಅನೇಕ ವರ್ಷಗಳಿಂದ ನಮಗೆ ಉದ್ದಿಮೆ ಪರವಾನಗಿ ನವೀಕರಣ ಮಾಡಿಕೊಡುತ್ತಿದ್ದ. ಆದರೆ, ಈ ವರ್ಷ ನಕಲಿ ಉದ್ದಿಮೆ ಪರವಾನಗಿ ನೀಡಿ ವಂಚಿಸಿದ್ದಾನೆ. ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದರು.</p>.<p>ಪಂಪ್ವೆಲ್ನ ಮಳಿಗೆಯೊಂದರ ಮಾಲೀಕರೂ ಅದೇ ದಲ್ಲಾಳಿಯಿಂದ ವಂಚನೆಗೆ ಒಳಗಾಗಿದ್ದಾರೆ. </p>.<p>‘ಪಡೀಲ್ ಬಜಾಲ್ನ ಪಿಠೋಪಕರಣ ವರ್ಕ್ಶಾಪ್ನ ಮಾಲೀಕರೊಬ್ಬರು ಉದ್ದಿಮೆ ಪರವಾನಗಿ ಕುರಿತ ದಾಖಲೆ ಪಡೆಯಲು ಬಂದಿದ್ದರು. ಅವರು ತೋರಿಸಿದ ಉದ್ದಿಮೆ ಪರವಾನಗಿಯನ್ನು ನೋಡಿದಾಗ, ಅದು ನಕಲಿ ಎಂಬುದು ತಿಳಿಯಿತು. ಪೃಥ್ವಿರಾಜ್ ಎಂಬ ದಲ್ಲಾಳಿ ಮೂಲಕ ಅವರು ಉದ್ದಿಮೆ ಪರವಾನಗಿ ಪಡೆದಿದ್ದುದು ತಿಳಿಯಿತು. ಈ ಬಗ್ಗೆ ದಲ್ಲಾಳಿ ವಿರುದ್ಧ ಕಂಕನಾಡಿಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ’ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇದೇ ರೀತಿ ಬೇರೆ ಉದ್ಯಮಿಗಳಿಗೂ ವಂಚನೆ ಆಗಿರುವ ಸಾಧ್ಯತೆ ಇದೆ. ಸುಮಾರು 4 ಸಾವಿರ ಮಂದಿಯ ಉದ್ದಿಮೆ ಪರವಾನಗಿ ಇನ್ನೂ ನವೀಕರಣ ಆಗಿಲ್ಲ. ಉದ್ದಿಮೆ ಪರವಾನಗಿ ನವೀಕರಣ ಆಗದವರು ಪಾಲಿಕೆಯ ವೆಬ್ಸೈಟ್ನ (http://www.mangalurucity.mrc.gov.in) ನಾಗರಿಕ ಸೇವೆಗಳ ವಿಭಾಗದಲ್ಲಿ ಪರಿಶೀಲಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಮಂಗಳೂರು ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಗಿ ಶುಲ್ಕ ಪಾವತಿಸುವ ಸಲುವಾಗಿ ದಲ್ಲಾಳಿಯೊಬ್ಬರು ವ್ಯಾಪಾರಿಗಳಿಂದ ಹಣ ಪಡೆದು, ನಕಲಿ ದಾಖಲೆ ನೀಡಿ ವಂಚಿಸಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಪಡೀಲ್ ಬಳಿಯ ಬಜಾಲ್ನ ಪಿಠೋಪಕರಣ ವರ್ಕ್ಶಾಪ್ನ ಮಾಲೀಕರೊಬ್ಬರಿಗೆ ನ್ಯಾಯಾಲಯಕ್ಕೆ ಸಲ್ಲಿಸಲು 15 ವರ್ಷಗಳ ಉದ್ದಿಮೆ ಪರವಾನಗಿ ದಾಖಲಾತಿಗಳು ಬೇಕಾಗಿದ್ದವು. ಅದನ್ನು ಪಡೆಯಲು ಅವರು ಪಾಲಿಕೆ ಕಚೇರಿಗೆ ತೆರಳಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.</p>.<p>‘ವರ್ಕ್ಶಾಪ್ನ ಉದ್ದಿಮೆ ಪರವಾನಗಿ ದಾಖಲೆ ಪಡೆಯಲು ಪಾಲಿಕೆ ಕಚೇರಿಗೆ ಹೋಗಿದ್ದೆವು. ಈ ವರ್ಷದ ಉದ್ದಿಮೆ ಪರವಾನಗಿ ನವೀಕರಣ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಏಜೆಂಟ್ ಮೂಲಕ ಶುಲ್ಕ ಕಟ್ಟಿ ಪರವಾನಗಿ ನವೀಕರಿಸಿದ್ದೇವೆ ಎಂದು ಉದ್ದಿಮೆ ಪರವಾನಗಿಯ ಪ್ರತಿಯನ್ನು ಅಧಿಕಾರಿಗಳಿಗೆ ತೋರಿಸಿದೆವು. ಪಾಲಿಕೆಯಿಂದ ನೀಡುವ ಉದ್ದಿಮೆ ಪರವಾನಗಿಯ ತರಹವೇ ಕಾಣುತ್ತಿದ್ದ ಆ ದಾಖಲೆ ನೋಡಿ ಸ್ವತಃ ಪಾಲಿಕೆ ಅಧಿಕಾರಿಗಳೂ ಅವಾಕ್ಕಾದರು. ಅದರೆ, ಪಾಲಿಕೆ ದಾಖಲೆಗಳಲ್ಲಿ ನಮ್ಮ ವರ್ಕ್ಶಾಪ್ನ ಉದ್ದಿಮೆ ಪರವಾನಗಿ ನವೀಕರಿಸಿದ ವಿವರ ದಾಖಲಾಗಿರಲಿಲ್ಲ’ ಎಂದು ಸಂತ್ರಸ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವಂಚನೆ ಮಾಡಿರುವ ದಲ್ಲಾಳಿ ಅನೇಕ ವರ್ಷಗಳಿಂದ ನಮಗೆ ಉದ್ದಿಮೆ ಪರವಾನಗಿ ನವೀಕರಣ ಮಾಡಿಕೊಡುತ್ತಿದ್ದ. ಆದರೆ, ಈ ವರ್ಷ ನಕಲಿ ಉದ್ದಿಮೆ ಪರವಾನಗಿ ನೀಡಿ ವಂಚಿಸಿದ್ದಾನೆ. ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದರು.</p>.<p>ಪಂಪ್ವೆಲ್ನ ಮಳಿಗೆಯೊಂದರ ಮಾಲೀಕರೂ ಅದೇ ದಲ್ಲಾಳಿಯಿಂದ ವಂಚನೆಗೆ ಒಳಗಾಗಿದ್ದಾರೆ. </p>.<p>‘ಪಡೀಲ್ ಬಜಾಲ್ನ ಪಿಠೋಪಕರಣ ವರ್ಕ್ಶಾಪ್ನ ಮಾಲೀಕರೊಬ್ಬರು ಉದ್ದಿಮೆ ಪರವಾನಗಿ ಕುರಿತ ದಾಖಲೆ ಪಡೆಯಲು ಬಂದಿದ್ದರು. ಅವರು ತೋರಿಸಿದ ಉದ್ದಿಮೆ ಪರವಾನಗಿಯನ್ನು ನೋಡಿದಾಗ, ಅದು ನಕಲಿ ಎಂಬುದು ತಿಳಿಯಿತು. ಪೃಥ್ವಿರಾಜ್ ಎಂಬ ದಲ್ಲಾಳಿ ಮೂಲಕ ಅವರು ಉದ್ದಿಮೆ ಪರವಾನಗಿ ಪಡೆದಿದ್ದುದು ತಿಳಿಯಿತು. ಈ ಬಗ್ಗೆ ದಲ್ಲಾಳಿ ವಿರುದ್ಧ ಕಂಕನಾಡಿಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ’ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇದೇ ರೀತಿ ಬೇರೆ ಉದ್ಯಮಿಗಳಿಗೂ ವಂಚನೆ ಆಗಿರುವ ಸಾಧ್ಯತೆ ಇದೆ. ಸುಮಾರು 4 ಸಾವಿರ ಮಂದಿಯ ಉದ್ದಿಮೆ ಪರವಾನಗಿ ಇನ್ನೂ ನವೀಕರಣ ಆಗಿಲ್ಲ. ಉದ್ದಿಮೆ ಪರವಾನಗಿ ನವೀಕರಣ ಆಗದವರು ಪಾಲಿಕೆಯ ವೆಬ್ಸೈಟ್ನ (http://www.mangalurucity.mrc.gov.in) ನಾಗರಿಕ ಸೇವೆಗಳ ವಿಭಾಗದಲ್ಲಿ ಪರಿಶೀಲಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>